ಜಗದ್ಗುರು XIV ನೇ ಲಿಯೋರವರು ಭಾನುವಾರದ ತ್ರಿಕಾಲ ಪ್ರಾಥ೯ನೆಯಲ್ಲಿ ಜಗದ್ಗುರು XIV ನೇ ಲಿಯೋರವರು ಭಾನುವಾರದ ತ್ರಿಕಾಲ ಪ್ರಾಥ೯ನೆಯಲ್ಲಿ  (ANSA)

ಜಗದ್ಗರುಗಳು: ಕ್ರೈಸ್ತರು ಸಂಪೂರ್ಣ ಏಕತೆಗಾಗಿ ಪ್ರಾರ್ಥನೆಯನ್ನು ಇನ್ನಷ್ಟು ಗಾಢಗೊಳಿಸೋಣ

ಕ್ರೈಸ್ತರ ಏಕತೆಗಾಗಿ ಪ್ರಾರ್ಥನೆಯ ವಾರದ ಆರಂಭವನ್ನು ಗುರುತಿಸಿ, ಜಗದ್ಗುರು XIVನೇ ಲಿಯೋ ರವರು ಅದರ ಮೂಲಗಳನ್ನು ಸ್ಮರಿಸಿ, ಕ್ರೈಸ್ತರ ನಡುವೆ ದೃಶ್ಯಮಾನವಾದ ಸಂಪೂರ್ಣ ಏಕತೆಗಾಗಿ ನವೀಕೃತ ಪ್ರಾರ್ಥನೆಗೆ ಕರೆ ನೀಡಿದರು.

ವ್ಯಾಟಿಕನ್ ವರದಿ

ಜನವರಿ 18ರಂದು ತ್ರಿಕಾಲ ಪ್ರಾರ್ಥನೆಯ ನಂತರ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಇಂದು ಆರಂಭವಾಗುತ್ತಿರುವ ಕ್ರೈಸ್ತರ ಏಕತೆಗಾಗಿ ಪ್ರಾರ್ಥನೆಯ ವಾರದ ಮೂಲಗಳನ್ನು ಸ್ಮರಿಸಿದರು. ಈ ಉಪಕ್ರಮವು ಎರಡು ಶತಮಾನಗಳ ಹಿಂದಿನಿಂದ ಆರಂಭವಾಗಿದ್ದು, ಜಗದ್ಗುರು XIVನೇ ಲಿಯೋರವರಿಂದ ಬಲವಾಗಿ ಪ್ರೋತ್ಸಾಹಿಸಲ್ಪಟ್ಟಿತ್ತು ಎಂದು ಅವರು ತಿಳಿಸಿದರು. ಹಾಗೆಯೇ, ನಿಖರವಾಗಿ ನೂರು ವರ್ಷಗಳ ಹಿಂದೆ, ಕ್ರೈಸ್ತರ ಏಕತೆಗಾಗಿ ಪ್ರಾರ್ಥನೆಯ ಅಷ್ಟಕ (ಆಕ್ಟೇವ್)ಕ್ಕೆ ಸಲಹೆಗಳು ಎಂಬ ದಸ್ತಾವೇಜಿನ ಮೂಲಕ ಈ ಉಪಕ್ರಮವು ಮೊದಲ ಬಾರಿಗೆ ಇನ್ನಷ್ಟು ಸಮೃದ್ಧಿಗೊಂಡಿತು ಎಂದು ಅವರು ಹೇಳಿದರು.

ಈ ವರ್ಷದ ಪ್ರಾರ್ಥನಾ ವಾರದ ವಿಷಯವು ಸಂತ ಪೌಲರ ಎಫೆಸಿಯರಿಗೆ ಬರೆದ ಪತ್ರಿಕೆಯಿಂದ ತೆಗೆದುಕೊಳ್ಳಲಾಗಿದೆ ಎಂದು ಜಗದ್ಗರುಗಳು ಸ್ಮರಿಸಿದರು ಒಂದು ದೇಹವಿದೆ, ಒಂದು ಆತ್ಮವಿದೆ ಹಾಗೆಯೇ ನಿಮ್ಮ ಕರೆಯ ಒಂದೇ ನಿರೀಕ್ಷೆಗೆ ನೀವು ಕರೆಯಲ್ಪಟ್ಟಿದ್ದೀರಿ”(ಎಫೆ 4:4). ಈ ವಾರದ ಪ್ರಾರ್ಥನೆಗಳು ಮತ್ತು ಧ್ಯಾನಗಳನ್ನು, ಅರ್ಮೇನಿಯನ್ ಪ್ರೇಷಿತರ ಧರ್ಮ ಸಭೆಯ ಅಂತರಧರ್ಮೀಯ ಸಂಬಂಧಗಳ ವಿಭಾಗದ ಸಂಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಐಕ್ಯಮತೀಯ ಗುಂಪೊಂದು ಸಿದ್ಧಪಡಿಸಿದೆ ಎಂದು ಜಗದ್ಗುರು XIVನೇ ಲಿಯೋ ರವರು ಹೇಳಿದರು, ಈ ದಿನಗಳಲ್ಲಿ ಎಲ್ಲಾ ಕಥೋಲಿಕ ಸಮುದಾಯಗಳು ಎಲ್ಲ ಕ್ರೈಸ್ತರ ಸಂಪೂರ್ಣ ಮತ್ತು ದೃಶ್ಯಮಾನ ಐಕ್ಯತೆಗಾಗಿ ತಮ್ಮ ಪ್ರಾರ್ಥನೆಯನ್ನು ಇನ್ನಷ್ಟು ಗಾಢಗೊಳಿಸಬೇಕೆಂದು ನಾನು ಆಹ್ವಾನಿಸುತ್ತೇನೆ ಎಂದರು.

ಜಗದ್ಗರುಗಳು ಮುಂದುವರೆದು, ಈ ಐಕ್ಯತೆಯ ಆಹ್ವಾನವು ಈ ವಾರದ ಪೂರ್ಣ ಅವಧಿಯಲ್ಲೂ ನಡೆಯುವ ಧ್ಯಾನಗಳಿಗೆ ಮಾರ್ಗದರ್ಶಿಯಾಗಲಿದೆ ಎಂದರು. ಈ ಪ್ರಾರ್ಥನಾ ವಾರವು ಜನವರಿ 25ರ ಭಾನುವಾರ ಕೊನೆಗೊಳ್ಳಲಿದೆ. ಸಂಪ್ರದಾಯದಂತೆ, ಸಂತ ಪೌಲರ ಪರಿವರ್ತನೆಯ ಮಹೋತ್ಸವದಂದು, ರೋಮ್ ನಲ್ಲಿ ಸಮಯ ಸಂಜೆ 5.30ಕ್ಕೆ, ಸಂತ ಪೌಲರ ಬಸಿಲಿಕಾದಲ್ಲಿ ನಡೆಯುವ ಸಂಜೆ ಪ್ರಾರ್ಥನಾ ಆಚರಣೆಗೆ ಜಗದ್ಗುರು XIVನೇ ಲಿಯೋರವರು ಅಧ್ಯಕ್ಷತೆ ವಹಿಸಲಿದ್ದಾರೆ.

18 ಜನವರಿ 2026, 00:00