ಪೋರ್ಚುಗಲ್ನಲ್ಲಿ ಪ್ರಾಣಹಾನಿ ಉಂಟುಮಾಡಿದ ಭೀಕರ ಚಂಡಮಾರುತದ ಬಲಿದಾನಿಗಳಿಗೆ ಜಗದ್ಗುರುಗಳು ಸಮೀಪತೆಯನ್ನು ವ್ಯಕ್ತಪಡಿಸಿದ್ದಾರೆ
ವ್ಯಾಟಿಕನ್ ನ್ಯೂಸ್
ಪೋರ್ಚುಗಲ್ನ ಮಧ್ಯಭಾಗವನ್ನು ಧ್ವಂಸಗೊಳಿಸಿದ ಚಂಡಮಾರುತ ಕ್ರಿಸ್ಟಿನ್ನ ಗಂಭೀರ ಪರಿಣಾಮಗಳ ಬಗ್ಗೆ ತಿಳಿದುಕೊಂಡ ಬಳಿಕ, ಜಗದ್ಗುರು XIVನೇ ಲಿಯೋರವರು ಪ್ರಾಣ ಕಳೆದುಕೊಂಡವರಿಗಾಗಿ ತಮ್ಮ ಸಂತಾಪವನ್ನು ವ್ಯಕ್ತಪಡಿಸಿ, ಅವರ ಕುಟುಂಬಗಳೊಂದಿಗೆ ಆತ್ಮೀಯ ಸಮೀಪತೆಯನ್ನು ವ್ಯಕ್ತಪಡಿಸಿದ್ದಾರೆ.
ಜಗದ್ಗರುಗಳ ಐಕ್ಯತೆ ಮತ್ತು ಪ್ರಾರ್ಥನೆಯ ಸಂದೇಶವು, ಅವರ ಪರವಾಗಿ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೆತ್ರೊ ಪಾರೊಲಿನ್ ಸಹಿ ಮಾಡಿರುವ ಸಂದೇಶದ ಮೂಲಕ ಕಳುಹಿಸಲಾಯಿತು. ಈ ಸಂದೇಶವನ್ನು ಪೋರ್ಚುಗೀಸ್ ಧರ್ಮಾಧ್ಯಕ್ಷರ ಸಮಾವೇಶದ ಅಧ್ಯಕ್ಷರಾದ ಧರ್ಮಾಧ್ಯಕ್ಷ ಜೋಸೆ ಓರ್ನೆಲಾಸ್ ಕಾರ್ವಾಲೊರವರಿಗೆ ಉದ್ದೇಶಿಸಲಾಗಿತ್ತು.
ಈ ವಾರ ಪೋರ್ಚುಗಲ್ನ ಮುಖ್ಯಭೂಮಿಯಲ್ಲಿ ಬೀಸಿದ ಚಂಡಮಾರುತದ ಪರಿಣಾಮವಾಗಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದು, ಗಾಳಿಯ ವೇಗವು ಗಂಟೆಗೆ 202 ಕಿಲೋಮೀಟರ್ವರೆಗೆ ತಲುಪಿತ್ತು. ಈ ಭೀಕರ ಚಂಡಮಾರುತವು ಎಂಟು ಜಿಲ್ಲೆಗಳಲ್ಲಿ ವ್ಯಾಪಕ ನಾಶವನ್ನು ಉಂಟುಮಾಡಿ, ಸುಮಾರು 10 ಲಕ್ಷ ಜನರಿಗೆ ವಿದ್ಯುತ್ ಸರಬರಾಜನ್ನು ಅಸ್ತವ್ಯಸ್ತಗೊಳಿಸಿತು.
ನೂರಾರು ಮಂದಿ ನಿರಾಶ್ರಿತರಾಗಿದ್ದು, ಲಿಸ್ಬನ್, ಲೈರಿಯಾ, ಕೊಯಿಂಬ್ರಾ, ಕಾಸ್ಟೆಲೊ ಬ್ರಾಂಕೊ, ಪೋರ್ಟಲೆಗ್ರೆ, ಸಂತಾರೆಂ, ಸೆತುಬಾಲ್ ಮತ್ತು ಗ್ವಾರ್ಡಾ ನಗರಗಳಲ್ಲಿ ಮೂಲಸೌಕರ್ಯಗಳಿಗೆ ಭಾರಿ ಹಾನಿಯುಂಟಾಯಿತು.
ಈ ಚಂಡಮಾರುತದಿಂದ ಉಂಟಾದ ವ್ಯಾಪಕ ಹಾನಿಯಿಂದ ಗಾಯಗೊಂಡವರು, ಸ್ಥಳಾಂತರಗೊಂಡವರು ಮತ್ತು ತೀವ್ರವಾಗಿ ಪ್ರಭಾವಿತರಾದ ಎಲ್ಲರ ಪರಿಸ್ಥಿತಿಗೆ ನಾನು ಅತ್ಯಂತ ಸಮೀಪತೆಯನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದು ಜಗದ್ಗುರು ಲಿಯೋರವರು ಹೇಳಿದರು. ಅವರು, ಸಹಾಯ ಒದಗಿಸಲು ಒಗ್ಗೂಡಿರುವ ರಾಷ್ಟ್ರೀಯ ಮತ್ತು ಸ್ಥಳೀಯ ಆಡಳಿತಗಳು, ಹಾಗೆಯೇ ನಾಗರಿಕ, ಸೈನಿಕ ಮತ್ತು ಧಾರ್ಮಿಕ ಸಂಸ್ಥೆಗಳಿಗಾಗಿ ಪ್ರಾರ್ಥಿಸುತ್ತಿರುವುದಾಗಿ ಹೇಳಿದರು.
ಅವರು ಧರ್ಮ ಸಭೆಯ ಸಂಸ್ಥೆಗಳ ನಿಷ್ಠಾವಂತ ಸೇವೆಗಾಗಿ ಹಾಗೂ ಸಾಮಾನ್ಯ ನಾಗರಿಕರಿಂದ ತೋರಿಬಂದ ಸ್ವಯಂ ಸ್ಫೂರ್ತಿ ಪರಸ್ಪರ ಸಹಾಯಕ್ಕಾಗಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಜೊತೆಗೆ, ಐಕ್ಯತೆಯ ಮಲಾಮು ಮತ್ತು ಕ್ರೈಸ್ತ ಭರವಸೆಯ ಬೆಳಕಿಗಾಗಿ ದೇವರನ್ನು ಬೇಡಿಕೊಳ್ಳುತ್ತಾ, ಈ ದುಃಖದಿಂದ ಬಳಲುತ್ತಿರುವ ಎಲ್ಲರನ್ನು ಫಾತಿಮಾದ ನಮ್ಮ ಮಾತೆಯ ಮಧ್ಯಸ್ಥಿಕೆಗೆ ಒಪ್ಪಿಸಿದರು.
