ಜಗದ್ಗರು XIVನೇ ಲಿಯೋರವರು ಉಕ್ರೇನಿನ ಗ್ರೀಕ್-ಕಥೋಲಿಕ ಧರ್ಮ ಸಭೆಯ ನಾಯಕರನ್ನು ಭೇಟಿ ಮಾಡಿದರು
ವ್ಯಾಟಿಕನ್ ವರದಿ
ಗುರುವಾರ ವಾಟಿಕನ್ನಲ್ಲಿ ಜಗದ್ಗುರು XIVನೇ ಲಿಯೋರವರು ಕೀವ್–ಹಾಲಿಚ್ನ ಮಹಾಧ್ಯಕ್ಷರಾದ ಸ್ವ್ಯಾಟೋಸ್ಲಾವ್ ಶೆವ್ಚುಕ್ ರವರನ್ನು ಭೇಟಿಯಾದರು. ಅವರು ಉಕ್ರೇನಿನ ಗ್ರೀಕ್-ಕಥೋಲಿಕ ಧರ್ಮ ಸಭೆಯ ಮುಖ್ಯಸ್ಥರಾಗಿದ್ದಾರೆ. ಈ ಭೇಟಿ ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿಯೇ ಮಹತ್ವ ಪಡೆದುಕೊಂಡಿತು.
ಭೇಟಿಯ ವೇಳೆ ಶೆವ್ಚುಕ್ ರವರು ಜಗದ್ಗುರುಗಳಿಗೆ ಯುದ್ಧದಲ್ಲಿ ಬಂಧಿತರಾದವರ ಪಟ್ಟಿಯನ್ನು ಸಲ್ಲಿಸಿದರು. ಇದರಿಂದ ಯುದ್ಧದಿಂದ ಉಂಟಾದ ಮಾನವೀಯ ಸಂಕಟವನ್ನು ಜಗದ್ಗುರುಗಳ ಗಮನಕ್ಕೆ ತರುವ ಉದ್ದೇಶವಿತ್ತು. ಬಂಧಿತರ ಬಿಡುಗಡೆ ಹಾಗೂ ಶಾಂತಿಗಾಗಿ ಪ್ರಾರ್ಥನೆ ಮತ್ತು ಪ್ರಯತ್ನಗಳು ಅಗತ್ಯವೆಂದು ಅವರು ಸೂಚಿಸಿದರು.
ಅದರ ಜೊತೆಗೆ, ಶಾಂತಿಗೆ ಸಮರ್ಪಿತವಾದ ಒಂದು ಶಿಲ್ಪವನ್ನೂ ಅವರು ಜಗದ್ಗುರುಗಳಿಗೆ ಉಡುಗೊರೆಯಾಗಿ ನೀಡಿದರು. ಈ ಶಿಲ್ಪವು ಯುದ್ಧದಿಂದ ಗಾಯಗೊಂಡ ವಿಶ್ವಕ್ಕೆ ಶಾಂತಿ ಮತ್ತು ಸಮಾಧಾನದ ಭರವಸೆಯನ್ನು ಪ್ರತಿಬಿಂಬಿಸುವ ಸಂಕೇತವಾಗಿತ್ತು.
ಶೆವ್ಚುಕ್ ರವರು ಯುದ್ಧ ಆರಂಭವಾಗಿನಿಂದ ಮಾನವ ಜೀವಗಳನ್ನು ಉಳಿಸಲು ನಡೆಸುತ್ತಿರುವ ಕಾರ್ಯಗಳಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳವು ತೋರಿದ ಸಹಾನುಭೂತಿ ಮತ್ತು ಬೆಂಬಲಕ್ಕೆ ಧನ್ಯವಾದ ವ್ಯಕ್ತಪಡಿಸಿದರು. ಈ ಬೆಂಬಲವು ಉಕ್ರೇನ್ ಜನತೆಗೆ ಧೈರ್ಯ ಮತ್ತು ಭರವಸೆಯನ್ನು ನೀಡುತ್ತಿದೆ ಎಂದು ಅವರು ಹೇಳಿದರು.
ಈ ಭೇಟಿ ಧರ್ಮ ಸಭೆಯ ಐಕ್ಯತೆ, ಮಾನವೀಯ ಸಹಾಯ ಮತ್ತು ಶಾಂತಿಯ ಅಗತ್ಯವನ್ನು ಮತ್ತೊಮ್ಮೆ ಒತ್ತಿಹೇಳಿತು. ಯುದ್ಧದ ನಡುವೆ ಕೂಡ ವಿಶ್ವಾಸ, ಸಹಕಾರ ಮತ್ತು ಪ್ರಾರ್ಥನೆಗಳ ಮೂಲಕ ಶಾಂತಿಯ ದಾರಿಗೆ ಸಾಗುವ ನಿರೀಕ್ಷೆ ಉಳಿದಿದೆ ಎಂಬ ಸಂದೇಶವನ್ನು ಈ ಸಂವಾದ ನೀಡಿತು.
