ಸಾಮಾನ್ಯರು, ಕುಟುಂಬ ಮತ್ತು ಜೀವನಕ್ಕಾಗಿ ಡಿಕ್ಯಾಸ್ಟರಿಯ ಸಮಗ್ರ ಸಭೆಯಲ್ಲಿ ಭಾಗವಹಿಸುವವರೊಂದಿಗೆ ಜಗದ್ಗುರು XIV ನೇ ಲಿಯೋರವರು ಸಾಮಾನ್ಯರು, ಕುಟುಂಬ ಮತ್ತು ಜೀವನಕ್ಕಾಗಿ ಡಿಕ್ಯಾಸ್ಟರಿಯ ಸಮಗ್ರ ಸಭೆಯಲ್ಲಿ ಭಾಗವಹಿಸುವವರೊಂದಿಗೆ ಜಗದ್ಗುರು XIV ನೇ ಲಿಯೋರವರು  (ANSA)

ಜಗದ್ಗುರಗಳು : ಕ್ರೈಸ್ತ ರೂಪಣೆಗಾಗಿ ಸಹನೆ, ಸಹಚರತ್ವ ಮತ್ತು ಸಂರಕ್ಷಣೆ ಅಗತ್ಯ

ಜಗದ್ಗುರು XIVನೇ ಲಿಯೋರವರು ಸಾಮಾನ್ಯ ಕ್ರೈಸ್ತ ಪ್ರಜೆ, ಕುಟುಂಬ ಮತ್ತು ಜೀವನಕ್ಕಾಗಿ ಇರುವ ಡಿಕಾಸ್ಟರಿಯ ಪೂರ್ಣಾಂಗ ಸಭೆಯಲ್ಲಿ ಭಾಗವಹಿಸಿದವರಿಗೆ ಭಾಷಣ ಮಾಡುತ್ತಾ, ಕ್ರೈಸ್ತ ರೂಪಣೆಯ ಮಹತ್ವವನ್ನು ಒತ್ತಿ ಹೇಳಿದರು. ಜೊತೆಗೆ, ಎಲ್ಲ ವಿಧದ ದುರುಪಯೋಗಗಳನ್ನು ತಡೆಯುವ ಅಗತ್ಯವಿದೆ ಎಂಬುದನ್ನು ಅವರು ವಿಶೇಷವಾಗಿ ಹೈಲೈಟ್ ಮಾಡಿದರು.

ವ್ಯಾಟಿಕನ್ ವರದಿ

ಕ್ರೈಸ್ತ ರೂಪಣೆಯಲ್ಲಿ ತೊಡಗಿರುವವರಿಗೆ ಮಾರ್ಗಸೂಚಿಯನ್ನು ನೀಡುತ್ತಾ, ಜಗದ್ಗುರು XIVನೇ ಲಿಯೋರವರು ಮಾನವ ಜೀವನದ ಎಲ್ಲ ಹಂತಗಳಲ್ಲಿ ಕಾಳಜಿ ವಹಿಸುವ ಮಹತ್ವವನ್ನು ವಿಶೇಷವಾಗಿ ಎತ್ತಿಹೇಳಿದರು. ಅಪ್ರಾಪ್ತರು ಮತ್ತು ದುರ್ಬಲರ ಮೇಲಿನ ಎಲ್ಲ ವಿಧದ ದುರುಪಯೋಗವನ್ನು ತಡೆಯುವಂತೆ ಸಮುದಾಯಗಳಲ್ಲಿ ಸೂಕ್ತ ರೂಪಣಾತ್ಮಕ ಅಂಶಗಳನ್ನು ಬೆಳೆಸುವುದು ಅಗತ್ಯವೆಂದು ಅವರು ಹೇಳಿದರು. ಜೊತೆಗೆ, ದುರುಪಯೋಗದ ಬಲಿಗಳಿಗೆ ಸಹಚರತ್ವ, ಬೆಂಬಲ ಮತ್ತು ಮಾರ್ಗದರ್ಶನ ನೀಡಬೇಕೆಂದು ಅವರು ಕರೆ ನೀಡಿದರು.

ಫೆಬ್ರವರಿ 6ರಂದು ಸಾಮಾನ್ಯ ಕ್ರೈಸ್ತ ಪ್ರಜೆ, ಕುಟುಂಬ ಮತ್ತು ಜೀವನಕ್ಕಾಗಿ ಇರುವ ಡಿಕಾಸ್ಟರಿಯ ಮೂರನೇ ಪೂರ್ಣಾಂಗ ಸಭೆಯಲ್ಲಿ ಮಾತನಾಡಿದ ಜಗದ್ಗುರುಗಳು, ಮಾನವ ಜೀವನವು ಪುರುಷ ಮತ್ತು ಮಹಿಳೆಯರ ಪ್ರೀತಿಯ ಮೂಲಕ ಪಸರಿಸುವಂತೆ, ಕ್ರೈಸ್ತ ಜೀವನವು ಸಮುದಾಯದ ಪ್ರೀತಿಯ ಮೂಲಕ ಹರಡುತ್ತದೆ ಎಂದು ಹೇಳಿದರು. ನಂಬಿಕೆಯನ್ನು ಹುಟ್ಟಿಸುವುದು ಕೇವಲ ಯಾಜಕ ಅಥವಾ ಧರ್ಮೋಪದೇಶಕರ ಕೆಲಸವಲ್ಲ, ಬದಲಾಗಿ ಕುಟುಂಬಗಳು, ಯುವಕರು, ಏಕಾಂಗಿಗಳು ಮತ್ತು ಸಮರ್ಪಿತ ವ್ಯಕ್ತಿಗಳಿಂದ ಕೂಡಿದ ಜೀವಂತ ಧರ್ಮ ಸಭೆಯೇ ನಂಬಿಕೆಯನ್ನು ಜನ್ಮ ನೀಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಪೋಷಕರು ತಮ್ಮ ಮಕ್ಕಳಿಗೆ ಜೀವ ನೀಡಲು ಬಯಸುವುದಕ್ಕೆ ಕಾರಣ ಹೊಂದಲು ಏನಾದರೂ ಬೇಕೆಂಬ ಆಸೆಯಲ್ಲ, ಬದಲಾಗಿ ತಮ್ಮೊಳಗಿನ ಪ್ರೀತಿ ಮತ್ತು ಸಂತೋಷವನ್ನು ಹಂಚಿಕೊಳ್ಳುವ ಬಯಕೆ ಎಂದು ಜಗದ್ಗುರುಗಳು ವಿವರಿಸಿದರು. ಇದೇ ಪ್ರತಿಯೊಂದು ಕ್ರೈಸ್ತ ರೂಪಣಾ ಯೋಜನೆಯ ಮೂಲವಾಗಿದೆ ಎಂದು ಅವರು ಹೇಳಿದರು. ರೂಪಣೆ ಎಂದರೆ ಕೇವಲ ಸಿದ್ಧಾಂತ, ನಿಯಮಗಳು ಅಥವಾ ನೈತಿಕತೆಯನ್ನು ಬೋಧಿಸುವುದಲ್ಲ, ಆದರೆ ನಾವು ಬದುಕುತ್ತಿರುವ ಜೀವನವನ್ನೇ ಉದಾರವಾಗಿ ಹಂಚಿಕೊಳ್ಳುವುದಾಗಿದೆ ಎಂದು ಅವರು ಒತ್ತಿ ಹೇಳಿದರು.

ಈ ಸಂದರ್ಭದಲ್ಲಿ, ಜಗದ್ಗುರು XIVನೇ ಲಿಯೋರವರು ರೂಪಕರನ್ನು ಮಕ್ಕಳಿಗೆ ನಂಬಿಕೆಯನ್ನು ಪಸರಿಸುವ ಪೋಷಕರಂತೆ ಇರಬೇಕೆಂದು ಆಹ್ವಾನಿಸಿದರು. ಆತ್ಮಗಳ ಮೇಲಿನ ಪ್ರಾಮಾಣಿಕ ಪ್ರೀತಿ, ಇತರರಿಗಾಗಿ ಕಷ್ಟ ಅನುಭವಿಸಲು ಸಿದ್ಧತೆ ಹಾಗೂ ಸಂಪೂರ್ಣ ಸಮರ್ಪಣೆ ಇವೆಲ್ಲವೂ ಕ್ರೈಸ್ತ ರೂಪಣೆಯ ಅವಿಭಾಜ್ಯ ಭಾಗಗಳಾಗಿವೆ ಎಂದು ಅವರು ತಿಳಿಸಿದರು. ಈ ದೃಷ್ಟಿಯಲ್ಲಿ ಸಂತ ಪೌಲರನ್ನು ಅವರು ಆದರ್ಶ ವ್ಯಕ್ತಿಯಾಗಿ ಸೂಚಿಸಿದರು.

ರೂಪಣೆ ಸುಲಭವಾದ ಕಾರ್ಯವಲ್ಲ ಮತ್ತು ಅದನ್ನು ತಾತ್ಕಾಲಿಕವಾಗಿ ನಡೆಸಲು ಸಾಧ್ಯವಿಲ್ಲ ಎಂದು ಜಗದ್ಗುರುಗಳು ಒಪ್ಪಿಕೊಂಡರು. ಇದಕ್ಕೆ ಸಹನೆ, ಆಲಿಕೆ, ಸಹಚರತ್ವ ಮತ್ತು ವೈಯಕ್ತಿಕ ಹಾಗೂ ಸಮುದಾಯ ಮಟ್ಟದಲ್ಲಿ ಪರಿಶೀಲನೆ ಅಗತ್ಯವಿದೆ ಎಂದರು. ಸಂತ ಇಗ್ನೇಷಿಯಸ್ ಲೊಯೋಲಾ, ಸಂತ ಫಿಲಿಪ್ ನೆರಿ, ಸಂತ ಅಗಸ್ಟಿನ್ ಮುಂತಾದ ಪವಿತ್ರರನ್ನು ಅವರು ಉದಾಹರಿಸಿ, ಅವರ ಜೀವನದಿಂದ ಪ್ರೇರಣೆ ಪಡೆಯುವಂತೆ ಕರೆ ನೀಡಿದರು.

ಅಂತಿಮವಾಗಿ, ಎದುರಾಗುವ ಸವಾಲುಗಳು ತಮ್ಮ ಶಕ್ತಿ ಮತ್ತು ಸಂಪನ್ಮೂಲಗಳಿಗಿಂತ ದೊಡ್ಡದಾಗಿ ಕಾಣಿಸಿದರೂ ನಿರಾಶರಾಗಬಾರದೆಂದು ಜಗದ್ಗುರುಗಳು ಸಭೆಯಲ್ಲಿ ಭಾಗವಹಿಸಿದವರಿಗೆ ಪ್ರೋತ್ಸಾಹ ನೀಡಿದರು. “ಸಾಸಿವೆ ಬೀಜದ” ಸುವಾರ್ತಾ ತರ್ಕವನ್ನು ಅನುಸರಿಸಿ ಚಿಕ್ಕದರಿಂದ ಆರಂಭಿಸಿ, ಸರಿಯಾದ ಸಮಯದಲ್ಲಿ ದೇವರು ಅಗತ್ಯವಾದ ಶಕ್ತಿ, ಜನರು ಮತ್ತು ಕೃಪೆಯನ್ನು ನೀಡುವನೆಂಬ ವಿಶ್ವಾಸದಲ್ಲಿರಬೇಕೆಂದು ಅವರು ಹೇಳಿದರು. ಧನ್ಯ ಕನ್ಯಾ ಮರಿಯಮ್ಮನವರ ಮೇಲೆ ನಂಬಿಕೆ ಇಟ್ಟು, ಅವರ ನಂಬಿಕೆಯನ್ನು ಅನುಕರಿಸುವಂತೆ ಜಗದ್ಗುರುಗಳು ಆಹ್ವಾನಿಸಿದರು.

06 ಫೆಬ್ರವರಿ 2026, 00:00