ಸಾಹೆಲ್ ಪ್ರದೇಶದಲ್ಲಿ ಶಾಂತಿ ಮತ್ತು ಅಭಿವೃದ್ಧಿಗಾಗಿ ಪ್ರಯತ್ನಗಳನ್ನು ಮುಂದುವರಿಸಲು ಜಗದ್ಗುರುಗಳು ಮನವಿ ಮಾಡಿದರು.
ವ್ಯಾಟಿಕನ್ ವರದಿ
ಭಾನುವಾರದ ರೆಜಿನಾ ಚೇಲಿ ಸಂದೇಶದ ವೇಳೆ ಮಾತನಾಡಿದ ಜಗದ್ಗುರು ಲಿಯೋರವರು, ಉತ್ತರ ಆಫ್ರಿಕಾದ ದಕ್ಷಿಣ ಭಾಗದಲ್ಲಿ ಅಟ್ಲಾಂಟಿಕ್ ಮಹಾಸಾಗರದಿಂದ ಕೆಂಪು ಸಮುದ್ರದವರೆಗೆ ವ್ಯಾಪಿಸಿರುವ ಸಾಹೆಲ್ ಪ್ರದೇಶದ ಅಸ್ಥಿರ ಪರಿಸ್ಥಿತಿಯ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದರು.
ಸಾಹೆಲ್ ಪ್ರದೇಶದಲ್ಲಿ, ವಿಶೇಷವಾಗಿ ಚಾಡ್ ಮತ್ತು ಮಾಲಿ ದೇಶಗಳಲ್ಲಿ ನಡೆದ ಇತ್ತೀಚಿನ ಭಯೋತ್ಪಾದಕ ದಾಳಿಗಳಿಂದ ಹಿಂಸಾಚಾರ ಹೆಚ್ಚುತ್ತಿರುವ ಸುದ್ದಿಯನ್ನು ನಾನು ಕಳವಳದಿಂದ ತಿಳಿದುಕೊಂಡಿದ್ದೇನೆ,ಎಂದು ಜಗದ್ಗುರುಗಳು ಹೇಳಿದರು. ವ್ಯಾಟಿಕನ್ನಲ್ಲಿ ಸಾಹೆಲ್ ಪ್ರದೇಶಕ್ಕಾಗಿ ಸ್ಥಾಪಿತವಾದ ದ್ವಿತೀಯ ಜಾನ್ ಪಾಲ್ ರವರು ಪ್ರತಿಷ್ಠಾನದ ಪ್ರತಿನಿಧಿಗಳನ್ನು ಭೇಟಿ ಮಾಡಿದ ಮರುದಿನ ಅವರು ಈ ಮಾತುಗಳನ್ನು ಹೇಳಿದರು.
ಬಲಿಯಾದವರಿಗಾಗಿ ಪ್ರಾರ್ಥಿಸುತ್ತೇನೆ ಎಂದು ಅವರು ಭರವಸೆ ನೀಡಿದರು, ದುಃಖ ಅನುಭವಿಸುತ್ತಿರುವ ಎಲ್ಲರೊಂದಿಗೆ ತಮ್ಮ ಆತ್ಮೀಯತೆಯನ್ನು ವ್ಯಕ್ತಪಡಿಸಿದರು ಮತ್ತು ಶಾಂತಿಯನ್ನು ಉತ್ತೇಜಿಸಲು ನಿರಂತರ ಪ್ರಯತ್ನಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಎಲ್ಲ ರೀತಿಯ ಹಿಂಸಾಚಾರ ಕೊನೆಗೊಳ್ಳಲಿ ಎಂದು ನಾನು ಆಶಿಸುತ್ತೇನೆ ಮತ್ತು ಆ ಪ್ರಿಯ ಭೂಮಿಯಲ್ಲಿ ಶಾಂತಿ ಹಾಗೂ ಅಭಿವೃದ್ಧಿಗಾಗಿ ನಡೆಯುವ ಪ್ರತಿಯೊಂದು ಪ್ರಯತ್ನವನ್ನೂ ನಾನು ಪ್ರೋತ್ಸಾಹಿಸುತ್ತೇನೆ, ಎಂದು ಜಗದ್ಗುರುಗಳು ಹೇಳಿದರು.
ಎಲ್ಲಾ ರೀತಿಯ ಹಿಂಸಾಚಾರ ಕೊನೆಗೊಳ್ಳಲಿ ಎಂದು ನಾನು ಆಶಿಸುತ್ತೇನೆ ಮತ್ತು ಆ ಪ್ರಿಯ ಭೂಮಿಯಲ್ಲಿ ಶಾಂತಿ ಹಾಗೂ ಅಭಿವೃದ್ಧಿಗಾಗಿ ನಡೆಯುವ ಪ್ರತಿಯೊಂದು ಪ್ರಯತ್ನವನ್ನೂ ನಾನು ಪ್ರೋತ್ಸಾಹಿಸುತ್ತೇನೆ.
ಪರಿಸರ ಮತ್ತು ಹವಾಮಾನ ದೃಷ್ಟಿಯಿಂದಲೂ ಸಾಹೆಲ್ ಪ್ರದೇಶವು ಅತ್ಯಂತ ಮಹತ್ವದ್ದಾಗಿದೆ. ಇದು ದಕ್ಷಿಣದ ಹೆಚ್ಚು ತೇವಾಂಶ ಹೊಂದಿರುವ ಸುಡಾನಿಯನ್ ಸವನ್ನಾ ಪ್ರದೇಶ ಮತ್ತು ಉತ್ತರದ ಒಣ ಸಾಹಾರಾ ಮರುಭೂಮಿಯ ನಡುವಿನ ಪರಿವರ್ತನಾ ವಲಯವಾಗಿದೆ. ಜೊತೆಗೆ, ಈ ಪ್ರದೇಶವು ದೀರ್ಘಕಾಲದಿಂದ ಆಂತರಿಕ ಅಸ್ಥಿರತೆ ಮತ್ತು ಬಾಹ್ಯ ರಾಜಕೀಯ ಸ್ಪರ್ಧೆಯಿಂದ ರೂಪುಗೊಂಡ ಭೌರಾಜಕೀಯ ಪ್ರದೇಶವಾಗಿದೆ.
ಹವಾಮಾನ ಸಂಕಷ್ಟವು ನಿರಂತರವಾಗಿ ಆಹಾರ ಮತ್ತು ನೀರಿನ ಕೊರತೆಯನ್ನು ಉಂಟುಮಾಡುತ್ತಿದೆ. ಸರ್ಕಾರದ ಭ್ರಷ್ಟಾಚಾರವು ಸೈನಿಕ ತಿರುಗಿಬೀಳುಗಳು, ದಂಗೆಗಳು ಮತ್ತು ಭಯೋತ್ಪಾದನೆಗೆ ಕಾರಣವಾಗಿದೆ.
