ಜಗದ್ಗುರು XIVನೇ ಲಿಯೋರವರು: ಶಾಂತಿಯ ಕಾಳಜಿ ವಹಿಸುವುದು ಎಂದರೆ ಜೀವದ ಕಾಳಜಿ ವಹಿಸುವುದಾಗಿದೆ.
ವ್ಯಾಟಿಕನ್ ವರದಿ
ಭಾನುವಾರದ ರೆಜಿನಾ ಚೇಲಿ ಪ್ರಾರ್ಥನೆಯ ವೇಳೆ ಜಗದ್ಗುರು XIVನೇ ಲಿಯೋರವರು ಮೇ 17ರಿಂದ 24ರವರೆಗೆ ಲೌದಾತೋ ಸಿ’ ವಾರ ನಡೆಯುತ್ತಿದೆ ಎಂದು ಸ್ಮರಿಸಿದರು.
ಈ ವಾರ್ಷಿಕ ಕಾರ್ಯಕ್ರಮವು ನಮ್ಮ ಸಾಮಾನ್ಯ ಮನೆಯಾದ ಭೂಮಿಯ ಆರೈಕೆಯ ಕುರಿತು ಜಗದ್ಗುರು ಫ್ರಾನ್ಸಿಸ್ ರವರ ಲೌದಾತೋ ಸಿ ಎನ್ಸೈಕ್ಲಿಕಲ್ನ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಭರವಸೆಯಿಂದ ಕಾರ್ಯದತ್ತ ಸಾಗಲು ಎಲ್ಲರನ್ನೂ ಆಹ್ವಾನಿಸುತ್ತದೆ.
ಜಗದ್ಗುರುಗಳು, ಲೌದಾತೋ ಸಿ’ ಚಳವಳಿಯ ಸದಸ್ಯರು ಹಾಗೂ ಸಮಗ್ರ ಪರಿಸರ ಸಂರಕ್ಷಣೆಗೆ ಕಾರ್ಯನಿರ್ವಹಿಸುವ ಎಲ್ಲರಿಗೂ ತಮ್ಮ ಬದ್ಧತೆಯನ್ನು ನವೀಕರಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ಧರ್ಮ ಸಭೆಯು ಅಸಿಸಿಯ ಸಂತ ಫ್ರಾನ್ಸಿಸ್ ರವರ ನಿಧನದ 800ನೇ ವರ್ಷದ ಸ್ಮರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಸೃಷ್ಟಿಯ ಮೇಲಿನ ಅವರ ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಜಗದ್ಗುರುಗಳು ಉಲ್ಲೇಖಿಸಿದರು.
“ಪವಿತ್ರ ಅಸಿಸಿಯ ಸಂತ ಫ್ರಾನ್ಸಿಸ್ ರವರ ಈ ಜೂಬಿಲಿ ವರ್ಷದಲ್ಲಿ, ದೇವರೊಂದಿಗೆ, ನಮ್ಮ ಸಹೋದರರು ಮತ್ತು ಸಹೋದರಿಯರೊಂದಿಗೆ ಹಾಗೂ ಎಲ್ಲಾ ಸೃಷ್ಟಿಗಳೊಂದಿಗೆ ಶಾಂತಿಯ ಕುರಿತು ಅವರು ನೀಡಿದ ಸಂದೇಶವನ್ನು ನಾವು ನೆನಪಿಸಿಕೊಳ್ಳೋಣ,” ಎಂದು ಅವರು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಯುದ್ಧಗಳು ಸೃಷ್ಟಿಯ ಆರೈಕೆಯ ಕ್ಷೇತ್ರದಲ್ಲಿ ನಡೆದ ಪ್ರಗತಿಯನ್ನು ಬಹಳ ಮಟ್ಟಿಗೆ ನಿಧಾನಗೊಳಿಸಿವೆ ಎಂದು ಜಗದ್ಗುರುಗಳು ವಿಷಾದ ವ್ಯಕ್ತಪಡಿಸಿದರು.
ಕೊನೆಯಲ್ಲಿ, ಜಗದ್ಗುರು XIVನೇ ಲಿಯೋರವರು ಶಾಂತಿಯ ಆರೈಕೆ ಮತ್ತು ಜೀವದ ಆರೈಕೆಯ ನಡುವಿನ ಅಂತರ್ನಿಹಿತ ಸಂಬಂಧವನ್ನು ಉಲ್ಲೇಖಿಸಿದರು.
“ಲೌದಾತೋ ಸಿ’ ಚಳವಳಿಯ ಸದಸ್ಯರು ಹಾಗೂ ಸಮಗ್ರ ಪರಿಸರ ಸಂರಕ್ಷಣೆಗೆ ಕೆಲಸ ಮಾಡುವ ಎಲ್ಲರೂ ತಮ್ಮ ಬದ್ಧತೆಯನ್ನು ನವೀಕರಿಸಿಕೊಳ್ಳಲಿ ಎಂದು ನಾನು ಪ್ರೋತ್ಸಾಹಿಸುತ್ತೇನೆ,” ಎಂದು ಅವರು ಹೇಳಿದರು. “ಶಾಂತಿಯ ಕಾಳಜಿ ವಹಿಸುವುದು ಎಂದರೆ ಜೀವದ ಕಾಳಜಿ ವಹಿಸುವುದಾಗಿದೆ” ಎಂದು ಹೇಳಿದರು.
