ಜಗದ್ಗುರು ಲಿಯೋ: ಜೂನ್ನಲ್ಲಿ ಮತ್ತೊಂದು ಕಾನ್ಸಿಸ್ಟರಿ; ಪ್ರತಿವರ್ಷ ಒಂದನ್ನು ನಡೆಸುತ್ತೇವೆ
ವ್ಯಾಟಿಕನ್ ವರದಿ
ಅಸಾಧಾರಣ ಕಾನ್ಸಿಸ್ಟರಿಯ ಮೊದಲ ಸಭೆ ಇಂದು ಸಂಜೆ ಅಂತ್ಯಗೊಂಡಿದ್ದು, ಮುಂದಿನ ಸಭೆಯನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಜೂನ್ ತಿಂಗಳಲ್ಲಿ, ಸಂತ ಪೇತ್ರ ಮತ್ತು ಸಂತ ಪೌಲರ ಮಹೋತ್ಸವದ ಸಮೀಪ, ಎರಡು ದಿನಗಳ ಕಾಲ ಮತ್ತೊಂದು ಅಸಾಧಾರಣ ಕಾನ್ಸಿಸ್ಟರಿ ವಾಟಿಕನ್ನಲ್ಲಿ ನಡೆಯಲಿದೆ. ಇದನ್ನು ಜಗದ್ಗುರು XIVನೇ ಲಿಯೋರವರು ಇಂದು ಮಧ್ಯಾಹ್ನ ನಡೆದ ಮೂರನೇ ಹಾಗೂ ಅಂತಿಮ ಅಧಿವೇಶನದ ಕೊನೆಯ ಭಾಷಣದಲ್ಲಿ ಘೋಷಿಸಿದರು. ಈ ಸಭೆಯಲ್ಲಿ ಮತದಾರರು ಮತ್ತು ಮತದಾರರಲ್ಲದವರು ಸೇರಿ ಒಟ್ಟು 170 ಕಾರ್ಡಿನಲ್ಗಳು ಭಾಗವಹಿಸಿದ್ದರು.
ಪ್ರೀ-ಕಾಂಕ್ಲೇವ್ ಸಾಮಾನ್ಯ ಸಭೆಗಳಲ್ಲಿ ವ್ಯಕ್ತವಾದ ಆಶಯಗಳೊಂದಿಗೆ ನಿರಂತರತೆಯಲ್ಲಿ ಈ ಸಭೆ ನಡೆಯುತ್ತಿದೆ ಎಂದು ಜಗದ್ಗರುಗಳು ವಿವರಿಸಿ, ಮುಂದಿನ ದಿನಗಳಲ್ಲಿ ಪ್ರತಿವರ್ಷ 3ರಿಂದ 4 ದಿನಗಳ ಕಾಲ ಕಾನ್ಸಿಸ್ಟರಿಗಳನ್ನು ನಡೆಸುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ಕಾನ್ಸಿಸ್ಟರಿ ನಮ್ಮ ಮುಂದಿನ ಪಯಣದ ಪೂರ್ವರೂಪವೆಂದು ಅವರು ಈಗಾಗಲೇ ಸೂಚಿಸಿದ್ದರು. ಜೊತೆಗೆ, ಕಳೆದ ಮಾರ್ಚ್ನಲ್ಲಿ ಘೋಷಿಸಲಾದ 2028ರ ಅಕ್ಟೋಬರ್ನಲ್ಲಿ ನಡೆಯುವ ಧರ್ಮ ಸಭೆಯ ಸಭೆಯನ್ನು ಅವರು ದೃಢಪಡಿಸಿದರು.
ಜಗದ್ಗುರು XIV ನೇ ಲಿಯೋರವರು ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿ, ವಿಶೇಷವಾಗಿ ವಯೋವೃದ್ಧ ಕಾರ್ಡಿನಲ್ಗಳು ತೋರಿದ ಸಮರ್ಪಣೆಯನ್ನು ಶ್ಲಾಘಿಸಿದರು. ರೋಮ್ಗೆ ಬರಲಾಗದೆ ಜಗತ್ತಿನ ವಿವಿಧ ಭಾಗಗಳಲ್ಲಿ ಇರುವ ಕಾರ್ಡಿನಲ್ಗಳಿಗೂ ತಮ್ಮ ಸಮೀಪತೆಯನ್ನು ವ್ಯಕ್ತಪಡಿಸಿದರು. ಈ ಎರಡು ದಿನಗಳಲ್ಲಿ ತಾವು ಅನುಭವಿಸಿದುದು ಸಿನೋಡಾಲಿಟಿ ಅಂದರೆ ಆಳವಾದ ಏಕಾತ್ಮತೆ ಮತ್ತು ಸಹಭಾಗಿತ್ವ ಎಂದು ಅವರು ಹೇಳಿದರು. ಜಗತ್ತಿನ ಗಂಭೀರ ಪರಿಸ್ಥಿತಿಯನ್ನು ಗಮನಿಸಿ, ಯುದ್ಧ ಮತ್ತು ಹಿಂಸೆಯಿಂದ ಬಳಲುತ್ತಿರುವ ಸ್ಥಳೀಯ ಧರ್ಮ ಸಭೆಗಳ ಬಳಿಗೆ ಸಮೀಪಿಸುವುದು ಧರ್ಮ ಸಭೆಗೆ ಇನ್ನಷ್ಟು ತುರ್ತು ಅಗತ್ಯವಾಗಿದೆ ಎಂದರು.
ಲ್ಯಾಟಿನ್ ಅಮೆರಿಕಾದ ಕಾರ್ಡಿನಲ್ಗಳ ವಿಶೇಷ ಗಮನ ವೆನಿಜುವೆಲಾ ಪರಿಸ್ಥಿತಿಯ ಮೇಲಿತ್ತು. ಕೊಲಂಬಿಯಾದ ಕಾರ್ಡಿನಲ್ ರೂಎಡಾ ಅಪಾರಿಸಿಯೊ ಅವರು, ಜಗದ್ಗುರು XIVನೇ ಲಿಯೋ ರವರು ಜನವರಿ 4ರಂದು ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದ ಆತಂಕ ಮತ್ತು ಶಾಂತಿ, ಸಂವಾದ ಹಾಗೂ ಮಾನವ ಹಕ್ಕುಗಳ ಗೌರವದ ಮೇಲಿನ ಕರೆಗಳನ್ನು ಸ್ಮರಿಸಿದರು. ವೆನಿಜುವೆಲಾ ವಿಷಯವು ಅಧಿಕೃತ ಕಾಯ೯ಸೂಚಿಯಲ್ಲದಿದ್ದರೂ, ಕಾರ್ಡಿನಲ್ಗಳ ಹೃದಯದಲ್ಲಿ ಅದು ಆಳವಾದ ಚಿಂತೆಯಾಗಿ ಉಳಿದಿದೆ ಎಂದು ಅವರು ಹೇಳಿದರು.
ಸಭೆಯ ವಾತಾವರಣವನ್ನು ವಿವರಿಸಿದ ಕಾರ್ಡಿನಲ್ ಬ್ರಿಸ್ಲಿನ್, ಡೇವಿಡ್ ಮತ್ತು ರೂಎಡಾರವರು, ಸಿಂಹಾಸನಾತ್ಮಕತೆಯನ್ನು “ಪಯಣದ ಸಹಯಾತ್ರಿಗಳಾಗಿ” ಬದುಕುವುದು, ಎವಂಜಲಿಯಂ ಗೌದಿಯಂ ಪಠ್ಯದ ನಿರಂತರ ಪ್ರಸ್ತುತತೆ, ಮತ್ತು ಪರಸ್ಪರ ಪರಿಚಯ ಹಾಗೂ ಆಲಿಸುವ ಮಹತ್ವವನ್ನು ಒತ್ತಿಹೇಳಿದರು. ಜಗದ್ಗುರು XIV ನೇ ಲಿಯೋರವರು ಹೆಚ್ಚು ಮಾತನಾಡದೇ ಗಮನವಿಟ್ಟು ಆಲಿಸಿ ಟಿಪ್ಪಣಿಗಳನ್ನು ತೆಗೆದುಕೊಳ್ಳುತ್ತಿರುವುದು ಎಲ್ಲರಿಗೂ ಧೈರ್ಯ ನೀಡಿತು. ಭಿನ್ನ ಹಿನ್ನೆಲೆಗಳಿದ್ದರೂ, ಏಕರೂಪತೆ ಅಲ್ಲದ ಸೌಹಾರ್ದತೆಯೊಳಗೆ ಈ ಕಾರ್ಯ ನಡೆಯಿತು ಎಂಬುದೇ ಈ ಕಾನ್ಸಿಸ್ಟರಿಯ ಪ್ರಮುಖ ಫಲವಾಗಿತ್ತು.