ರೋಮ್ ನ ಲುಮ್ಸಾ ವಿಶ್ವವಿದ್ಯಾನಿಲಯದಲ್ಲಿ ಕಾಡಿ೯ನಲ್ ಪಿಯೆಟ್ರೋ ಪ್ಯಾರೊಲಿನ್ ರಾಜ್ಯ ಕಾಯ೯ದಶಿ೯ ರೋಮ್ ನ ಲುಮ್ಸಾ ವಿಶ್ವವಿದ್ಯಾನಿಲಯದಲ್ಲಿ ಕಾಡಿ೯ನಲ್ ಪಿಯೆಟ್ರೋ ಪ್ಯಾರೊಲಿನ್ ರಾಜ್ಯ ಕಾಯ೯ದಶಿ೯ 

ರಾಜ್ಯ ಕಾರ್ಯದರ್ಶಿ ಕಾರ್ಡಿನಲ್ ಪಿಯೇತ್ರೋ ಪಾರೋಲಿನ್ ರವರು ಮಾತನಾಡಿ: “ಮಿನಿಯಾಪಾಲಿಸ್‌ನಲ್ಲಿ ಸಂಭವಿಸುತ್ತಿರುವ ಹಿಂಸಾಚಾರ ಸ್ವೀಕರಿಸಲು ಸಾಧ್ಯವಿಲ್ಲ ಎಂದರು

ಮಿನನೆಸೋಟಾದಲ್ಲಿ ಉಂಟಾಗಿರುವ ಒತ್ತಡದ ವಾತಾವರಣ ಕುರಿತು, ಜಗದ್ಗುರುಗಳ ಅಧಿಕಾರ ಹುದ್ದಯ‘ಬೋರ್ಡ್ ಆಫ್ ಪೀಸ್’‍ನ ಮೇಲೆ ಹೊಂದಿರುವ ಸ್ಥಿತಿಗತಿಯ ಬಗ್ಗೆ ಮತ್ತು ಗ್ರೀನ್ಲ್ಯಾಂಡ್ ಕುರಿತು ನಡೆಯುತ್ತಿರುವಲ್ಲದೇ ರಾಜತಾಂತ್ರಿಕ ಮಾತುಕತೆಗಳ ಬಗ್ಗೆ ಪತ್ರಕರ್ತರಿಗೆ ನಾನು ಉತ್ತರಿಸಿದೆ ಎಂದರು

ವ್ಯಾಟಿಕನ್ ವರದಿ

ಜಗದ್ಗರುಗಳ ಅಧಿಕಾರ ಹುದ್ದೆಯ ನಿಲುವು ಎಂದಿಗೂ ಯಾವುದೇ ರೀತಿಯ ಹಿಂಸೆಯನ್ನು ತಪ್ಪಿಸುವುದೇ ಆಗಿದೆ. ಆದ್ದರಿಂದ ಈ ರೀತಿಯ ಘಟನೆಗಳನ್ನು ನಾವು ಒಪ್ಪಿಕೊಳ್ಳಲಾರೆವು, ಎಂದು ರಾಜ್ಯ ಕಾರ್ಯದರ್ಶಿ ಕಾರ್ಡಿನಲ್  ಪಿಯೇತ್ರೋ ಪಾರೋಲಿನ್ ಹೇಳಿದರು. ಮಿನೆಸೋಟಾ ರಾಜ್ಯದಲ್ಲಿ ಇಮಿಗ್ರೇಷನ್ ಅಂಡ್ ಕಸ್ಟಮ್ಸ್ ಎನ್‌ಫೋರ್ಸ್‌ಮೆಂಟ್ (ಐ ಸಿ ಇ) ಏಜೆಂಟ್‌ಗಳ ಕಾರ್ಯಾಚರಣೆಯಿಂದ ಇಬ್ಬರು ಅಮೆರಿಕ ನಾಗರಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು. ಸಮಸ್ಯೆಗಳು ಮತ್ತು ವಿರೋಧಾಭ್ಯಾಸಗಳನ್ನು ಬೇರೆ ಮಾರ್ಗಗಳಲ್ಲಿ ಪರಿಹರಿಸಬೇಕು ಎಂದು ಅವರು ಒತ್ತಿಹೇಳಿದರು.

ರೋಮ್‌ನ ಲುಂಸಾ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ನೈತಿಕತೆ ಮತ್ತು ಆರ್ಥಿಕತೆ ಸಭೆಯ ಸಂದರ್ಭದಲ್ಲಿ ಮಾತನಾಡಿದ ಕಾರ್ಡಿನಲ್ ಪಾರೋಲಿನ್ ರವರು, ಈ ಪರಿಸ್ಥಿತಿಯನ್ನು ಸ್ವೀಕರಿಸಲಾಗದು ಎಂದು ವರ್ಣಿಸಿದರು. ಈ ವಿಷಯದಲ್ಲಿ ಅಮೆರಿಕದ ಬಿಷಪ್‌ಗಳ ಹಿಂದಿನ ಹೇಳಿಕೆಗೆ ತಮ್ಮ ಬೆಂಬಲವನ್ನೂ ಅವರು ವ್ಯಕ್ತಪಡಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ನೇತೃತ್ವದಲ್ಲಿ ಸ್ಥಾಪನೆಯಾಗುತ್ತಿರುವ ‘ಬೋರ್ಡ್ ಆಫ್ ಪೀಸ್’ ಕುರಿತು ಜಗದ್ಗುರುಗಳ ಅಧಿಕಾರ ಹುದ್ದೆ ಭಾಗವಹಿಸುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಯೋಜನೆಯಲ್ಲಿ ಕೆಲವು ಸಮಸ್ಯಾತ್ಮಕ ಅಂಶಗಳಿವೆ ಎಂದು ಹೇಳಿದರು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಚಿಂತನೆಯ ನಂತರವೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಇನ್ನೂ ಅಂತಿಮ ಉತ್ತರ ನೀಡಲಾಗಿಲ್ಲ ಎಂದು ಅವರು ಹೇಳಿದರು.

ಡೆನ್ಮಾರ್ಕ್ ಪ್ರವಾಸದ ಬಳಿಕ ಗ್ರೀನ್‌ಲ್ಯಾಂಡ್ ವಿಷಯದ ಬಗ್ಗೆ ಮಾತನಾಡಿದ ಕಾರ್ಡಿನಲ್ ಪಾರೋಲಿನ್, ವಿದೇಶಾಂಗ ಸಚಿವ ಲಾರ್ಸ್ ಲೊಕ್ಕೇ ರಾಸ್ಮುಸನ್ ರವರೊಂದಿಗೆ ನಡೆದ ಮಾತುಕತೆಗಳು ಸಕಾರಾತ್ಮಕವಾಗಿದ್ದವು ಎಂದು ಹೇಳಿದರು. ಈ ಸಂವಾದಗಳ ಮೂಲಕ ಒಪ್ಪಂದ ಮತ್ತು ಪರಿಹಾರದ ದಿಕ್ಕಿನಲ್ಲಿ ನಾವು ಸಾಗುತ್ತಿದ್ದೇವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ಇಟಲಿಯ ದಕ್ಷಿಣ ಭಾಗದಲ್ಲಿರುವ “ಕಾಸಾ ಸೊಲ್ಲಿಯೇವೋ ದೆಲ್ಲಾ ಸೋಫ್ಫೆರೇನ್ಸಾ” ಆಸ್ಪತ್ರೆಯ ಆರ್ಥಿಕ ಸಂಕಷ್ಟ ಮತ್ತು ಕಾರ್ಮಿಕರ ಸಮಸ್ಯೆಗಳ ಕುರಿತು ಮಾತನಾಡಿದ ಅವರು, ಸಮಸ್ಯೆ ಪರಿಹಾರಕ್ಕೆ ಎಲ್ಲ ಸಾಧ್ಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಆರ್ಥಿಕ ಪಾರದರ್ಶಕತೆ ಕುರಿತು ಉಂಟಾದ ಟೀಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವುದಾಗಿ ಭರವಸೆ ನೀಡಿದರು ಹಾಗೂ ಕಾರ್ಮಿಕರ ಚಿಂತೆಗೆ ಸ್ಪಂದಿಸುವುದಾಗಿ ಹೇಳಿದರು.

29 ಜನವರಿ 2026, 00:00