ಕಾಡಿ೯ನಲ್ ಮರಿಯೋ ಜೆನಾರಿ ಕಾಡಿ೯ನಲ್ ಮರಿಯೋ ಜೆನಾರಿ 

ಕಾರ್ಡಿನಲ್ ಜೆನಾರಿ 80 ವರ್ಷ ವಯಸ್ಸು ತಲುಪಿದ ಹಿನ್ನೆಲೆಯಲ್ಲಿ ಸಿರಿಯಾದ ಜಗದ್ಗುರುಗಳ ರಾಯಭಾರಿ ಹುದ್ದೆಯ ಕರ್ತವ್ಯಕ್ಕೆ ತೆರೆ

2008ರಿಂದ ದಮಾಸ್ಕಸ್‌ನಲ್ಲಿ ಸಿರಿಯಾದ ಪ್ರೇಷಿತರ ರಾಯಭಾರಿ ಆಗಿ ಸೇವೆ ಸಲ್ಲಿಸುತ್ತಿದ್ದ ಕಾರ್ಡಿನಲ್ ಮಾರಿಯೋ ಜೆನಾರಿ ಜಗದ್ಗುರು ಫ್ರಾನ್ಸಿಸ್ ರವರು 2016ರಲ್ಲಿ ಅವರನ್ನು ಕಾರ್ಡಿನಲ್‌ ಆಗಿ ನೇಮಕ ಮಾಡಿದ್ದು, ಅವರ ಹುದ್ದೆಯ ಅವಧಿಯನ್ನು ವಿಸ್ತರಿಸಿದ್ದರೂ—80 ವರ್ಷದ ವಯೋಮಿತಿಗೆ ತಲುಪಿದ ಕಾರಣ ಸೋಮವಾರ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಸುಮಾರು ಹದಿನೇಳು ವರ್ಷಗಳ ಅವಧಿಯಲ್ಲಿ ಅವರು ಮಧ್ಯಪ್ರಾಚ್ಯದ ಈ ದೇಶದಲ್ಲಿ ಗಂಭೀರ ರಾಜತಾಂತ್ರಿಕ ಹಾಗೂ ಮಾನವೀಯ ಸೇವೆಯನ್ನು ನೆರವೇರಿಸಿದ್ದಾರೆ. ಯುದ್ಧ, ಬಡತನ, ಭಯೋತ್ಪಾದನೆ, ನಿರ್ಬಂಧಗಳು, ವಿವಿಧ ಸಂಕಷ್ಟಗಳು ಮತ್ತು ಭೂಕಂಪಗಳಿಂದ ನರಳುತ್ತಿರುವ ಜನತೆಗೆ ಅವರು ಸದಾ ದೃಢವ

ವ್ಯಾಟಿಕನ್ ವರದಿ

2021ರಲ್ಲಿ 75 ವರ್ಷ ವಯಸ್ಸು ತಲುಪಿದಾಗ, ನಿಯಮಾನುಸಾರ ನಿವೃತ್ತಿ ವಯಸ್ಸಿನ ಹಿನ್ನೆಲೆಯಲ್ಲಿ, ಕಾರ್ಡಿನಲ್ ಮಾರಿಯೋ ಜೆನಾರಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು. ದಮಾಸ್ಕಸ್‌ನಲ್ಲಿ ಪ್ರೇಷಿತರ ರಾಯಭಾರಿ ಆಗಿ ಅವರು ನಡೆಸಿದ ಸೇವೆ ಕೇವಲ ರಾಜತಾಂತ್ರಿಕ ಹುದ್ದೆಯಷ್ಟೇ ಅಲ್ಲ, ಅದು ಯುದ್ಧಪೀಡಿತ ಸಿರಿಯಾದಲ್ಲಿ ಜಗದ್ಗುರುಗಳ ಪ್ರತಿನಿಧಿಯಾಗಿ ಮತ್ತು ವಿಶ್ವ ಧರ್ಮ ಸಭೆಗೆ ದೃಢವಾದ ಆಧಾರವಾಗಿ ರೂಪುಗೊಂಡ ನಿಜವಾದ ಗುರಿ ಆಗಿತ್ತು. ಆದರೆ ಜಗದ್ಗುರು ಫ್ರಾನ್ಸಿಸ್ ರವರು ಆ ರಾಜೀನಾಮೆಯನ್ನು ತಿರಸ್ಕರಿಸಿ, ಅವರನ್ನು “ಅನಿರ್ದಿಷ್ಟ ಅವಧಿಗೆ” ಹುದ್ದೆಯಲ್ಲಿ ಮುಂದುವರಿಸಿದರು. ಇದನ್ನು ಜೆನಾರಿ ಅವರು ಯುದ್ಧ ಮತ್ತು ಬಡತನದಿಂದ ಗಾಯಗೊಂಡ ಸಿರಿಯ ಜನತೆಗೆ ನೀಡಿದ ವಿಶೇಷ ಗಮನದ ಸಂಕೇತವೆಂದು ವ್ಯಾಖ್ಯಾನಿಸಿದರು.

2026ರ ಜನವರಿ 5ರಂದು 80 ವರ್ಷ ವಯಸ್ಸು ತಲುಪಿದ ಹಿನ್ನೆಲೆಯಲ್ಲಿ, ಕಾರ್ಡಿನಲ್ ಜೆನಾರಿ ತಮ್ಮ ದೀರ್ಘಕಾಲದ ಸೇವೆಯನ್ನು ಅಂತ್ಯಗೊಳಿಸಿದ್ದಾರೆ. ಫೆಬ್ರವರಿ 2ರಂದು ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಪ್ರಕಟಣೆಯ ಮೂಲಕ ಅವರ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಈ ಸಂಕ್ಷಿಪ್ತ ಪ್ರಕಟಣೆಯ ಹಿಂದೆ, ಜಗತ್ತಿನ ಅತ್ಯಂತ ಗಾಯಗೊಂಡ ಪ್ರದೇಶಗಳಲ್ಲಿ ಒಂದರಲ್ಲಿ ಸೇವೆ ಸಲ್ಲಿಸಿದ ಒಬ್ಬ ಕ್ಷೇತ್ರದ ಅಧಿಕಾರಿ ಅವರ ಅಪಾರ ಅನುಭವ ಮತ್ತು ತ್ಯಾಗದ ಮಹಾಕಥೆ ಅಡಗಿದೆ.

ವೆರೋನಾ ಸಮೀಪದ ರೋಸೆಗಫೆರ್ರೋ ಗ್ರಾಮದಲ್ಲಿ ಜನಿಸಿದ ಜೆನಾರಿ, ಪಾಂಟಿಫಿಕಲ್ ಎಕ್ಲೆಸಿಯಾಸ್ಟಿಕಲ್ ಅಕಾಡೆಮಿಯಲ್ಲಿ ತರಬೇತಿ ಪಡೆದು, ತಮ್ಮನ್ನು ತಾವೇ ಯುದ್ಧದ ಅನುಭವ ಹೊಂದಿದವನು ಎಂದು ಕರೆದುಕೊಂಡವರು. ಐವರಿ ಕೋಸ್ಟ್, ನೈಜರ್, ಬುರ್ಕಿನಾ ಫಾಸೋ ಮತ್ತು ಶ್ರೀಲಂಕಾದಲ್ಲಿ ಸೇವೆ ಸಲ್ಲಿಸಿದ ನಂತರ, 2008ರಲ್ಲಿ ಜಗದ್ಗುರು XVI ನೇ ಬೆನೆಡಿಕ್ಟ್ ರವರ ನೇಮಕದ ಮೂಲಕ ಅವರು ಮೊದಲ ಬಾರಿಗೆ ಸಿರಿಯಾಕ್ಕೆ ಆಗಮಿಸಿದರು. ಆಗಿನ ಸಿರಿಯಾ ಹೊರತೋರುವ ಸ್ಥಿರತೆ ಮತ್ತು ಆರ್ಥಿಕ ತೆರೆಯುವಿಕೆಯ ಹಂತದಲ್ಲಿದ್ದರೂ, ಒಳಗಿನ ಸಾಮಾಜಿಕ ಒತ್ತಡಗಳಿಂದ ಕೂಡಿತ್ತು.

2011ರಲ್ಲಿ ಯುದ್ಧ ಸ್ಫೋಟಗೊಂಡ ನಂತರ, ಐಸಿಸ್ ಹಿಂಸಾಚಾರ, ಬಾಂಬ್ ದಾಳಿಗಳು ಮತ್ತು ಅಪಾರ ಮಾನವೀಯ ಸಂಕಷ್ಟಗಳ ನಡುವೆ ಜೆನಾರಿ ಸದಾ ಅಲ್ಲಿಯೇ ಉಳಿದರು. ಶಾಂತಿಗೆ ದಾರಿ ಹುಡುಕುವ ರಾಜತಾಂತ್ರಿಕ ಪ್ರಯತ್ನಗಳು ಮತ್ತು ಜನತೆಗೆ ಸಮೀಪವಿದ್ದು ಸಾಂತ್ವನ ನೀಡುವ ಮಾನವೀಯ ಸೇವೆಇವುಗಳ ಮೂಲಕ ಅವರು ಸಿರಿಯಾದಲ್ಲಿ ಭೂಮಿಯ ಮೇಲಿನ ನರಕವನ್ನು ಅನುಭವಿಸುತ್ತಿದ್ದ ಜನರೊಂದಿಗೆ ನಿಂತರು. ಅವರು ಮಾನವೀಯ ವಿಪತ್ತಿನ ಕುರಿತು, ಅಂತರರಾಷ್ಟ್ರೀಯ ನಿರ್ಲಕ್ಷ್ಯ ಮತ್ತು ನಿರ್ಬಂಧಗಳಿಂದ ಜನರು ಅನುಭವಿಸುತ್ತಿರುವ ದುಃಸ್ಥಿತಿಯ ಕುರಿತು ಧೈರ್ಯದಿಂದ ಮಾತಾಡಿದರು.

2016ರಲ್ಲಿ ಜಗದ್ಗುರುಗಳು ಫ್ರಾನ್ಸಿಸ್ ರವರು ಅವರನ್ನು ಕಾರ್ಡಿನಲ್ ಆಗಿ ನೇಮಿಸಿದಾಗ, ಇದು ಜಗದ್ಗುರುಗಳ ರಾಜತಾಂತ್ರಿಕ ಸೇವೆಯ ಇತಿಹಾಸದಲ್ಲೇ ಅಪರೂಪದ ನಿರ್ಧಾರವಾಗಿತ್ತು. ಜೆನಾರಿ ಇದನ್ನು ಸಿರಿಯಾದ ಶಹೀದ ಜನತೆಗೆ ಸಲ್ಲಿಸಿದ ಪ್ರೀತಿಯ ಸಂಕೇತ ಎಂದು ವಿವರಿಸಿದರು. ಕಾರ್ಡಿನಲ್ ಪದವಿ ಅವರ ದಮಾಸ್ಕಸ್‌ನಲ್ಲಿನ ಸೇವೆಯನ್ನು ಇನ್ನಷ್ಟು ಬಲಪಡಿಸಿತು. ಅತ್ಯಂತ ಅಗತ್ಯವಿರುವ ಸ್ಥಳದಿಂದ ಜಗದ್ಗುರುಗಳ ಪ್ರತಿನಿಧಿ ಓಡಿ ಹೋಗುವುದು ಹೇಗೆ ಸಾಧ್ಯ? ಎಂಬ ಅವರ ಮಾತು, ಈ ಗುರಿಯನ್ನು ದೇವರು ನೀಡಿದ ವಿಶೇಷ ವರವೆಂದು ಅವರು ಕಂಡುಕೊಂಡಿದ್ದನ್ನು ತೋರಿಸುತ್ತದೆ.

ಇಂದು ಅವರ ರಾಜೀನಾಮೆಯೊಂದಿಗೆ, ಯುದ್ಧಪೀಡಿತ ಜನರೊಂದಿಗೆ ನಿಂತು ದೀರ್ಘಕಾಲ ಸೇವೆ ಸಲ್ಲಿಸಿದ ಒಬ್ಬ ಅನುಭವಿ ರಾಜತಾಂತ್ರಿಕ ಮತ್ತು ಮೇದಾವಿಯ ಅಧ್ಯಾಯ ಮುಕ್ತಾಯಗೊಂಡಿದೆ. ಇದು ಕೇವಲ ಒಂದು ಹುದ್ದೆಯ ಅಂತ್ಯವಲ್ಲ, ಬದಲಾಗಿ ನೋವಿನಿಂದ ನರಳಿದ ಜನರ ಮಧ್ಯೆ ಭರವಸೆ ಮತ್ತು ಸಾಕ್ಷಿಯಾಗಿದ್ದ ಜೀವನಯಾತ್ರೆಯ ಸ್ಮರಣೀಯ ಅಂತ್ಯವಾಗಿದೆ.

02 ಫೆಬ್ರವರಿ 2026, 15:11