2026.04.28 Alexander Kluge, The Soul on Its Globe , 2026. Print on copper, 81 x 46.5 cm. The Pavilion of the Holy See: The Ear is the Eye of the Soul

ಜಗದ್ಗುರುಗಳ ಅಧಿಕಾರ ಸ್ಥಳವು ಎರಡನೇ ಪೆವಿಲಿಯನ್ ವೆನಿಸ್ ಬಿಯೆನ್ನಾಲೆಯಲ್ಲಿ ಉದ್ಘಾಟಿಸಲಾಯಿತು.

ಜಗದ್ಗುರುಗಳ ಅಧಿಕಾರ ಸ್ಥಳವು ವೆನಿಸ್ ಬಿಯೆನ್ನಾಲೆಯಲ್ಲಿ ತನ್ನ ಪೆವಿಲಿಯನ್‌ನ ಎರಡನೇ ಕೇಂದ್ರವನ್ನು ಉದ್ಘಾಟಿಸಿದ್ದು, ಅದು ಬಿಂಗೆನ್‌ನ ಸಂತ ಹಿಲ್ಡೆಗಾರ್ಡ್ ರವರಿಂದ ಪ್ರೇರಿತವಾಗಿದೆ. ಈ ಪೆವಿಲಿಯನ್ ಧ್ಯಾನ, ಮೌನ ಮತ್ತು ಆಲಿಸುವ ಮನೋಭಾವವನ್ನು ಆತ್ಮೀಯ ಹಾಗೂ ಮಾನವೀಯ ನವೀಕರಣದ ಮಾರ್ಗಗಳಾಗಿ ಕೇಂದ್ರೀಕರಿಸಿದೆ.

ವ್ಯಾಟಿಕನ್ ವರದಿ

61ನೇ ಅಂತರರಾಷ್ಟ್ರೀಯ ವೆನಿಸ್ ಬಿಯೆನ್ನಾಲೆ ಕಲಾ ಪ್ರದರ್ಶನದ ಸಂದರ್ಭದಲ್ಲಿ, ಜಗದ್ಗುರುಗಳ ಅಧಿಕಾರ ಸ್ಥಳವು ವೆನಿಸ್‌ನ ಕಾಸ್ತೆಲ್ಲೊ ಪ್ರದೇಶದಲ್ಲಿರುವ ಸಾಂತಾ ಮರಿಯಾ ಔಸಿಲಿಯಾತ್ರಿಚೆ ಸಂಕೀರ್ಣದಲ್ಲಿ ತನ್ನ ಪೆವಿಲಿಯನ್‌ನ ಎರಡನೇ ಕೇಂದ್ರವನ್ನು ಉದ್ಘಾಟಿಸಿತು.

ಜಗದ್ಗುರುಗಳ ಅಧಿಕಾರ ಸ್ಥಳವು ಪೆವಿಲಿಯನ್ ಎರಡು ಪರಸ್ಪರ ಪೂರಕವಾದ ವೆನಿಸ್ ಕೇಂದ್ರಗಳಲ್ಲಿ ರೂಪುಗೊಂಡಿದೆ. ಮೊದಲ ಕೇಂದ್ರವನ್ನು ಶುಕ್ರವಾರ ಮಧ್ಯಾಹ್ನ ಕನ್ನಾರೆಜಿಯೊ ಪ್ರದೇಶದಲ್ಲಿರುವ ಗುಪ್ತ ಕಾರ್ಮೆಲೈಟ್ ಉದ್ಯಾನ – “ಜಿಯಾರ್ಡಿನೊ ಮಿಸ್ಟಿಕೊ ದೇಯಿ ಕಾರ್ಮೆಲಿತಾನಿ ಸ್ಕಾಲ್ಸಿ” – ಯಲ್ಲಿ ಉದ್ಘಾಟಿಸಲಾಯಿತು.

“ಕಿವಿಯೇ ಆತ್ಮದ ಕಣ್ಣು” ಎಂಬ ಶೀರ್ಷಿಕೆಯಡಿ, ಈ ಎರಡೂ ಕೇಂದ್ರಗಳು ಬಿಂಗೆನ್‌ನ ಸಂತ ಹಿಲ್ಡೆಗಾರ್ಡ್ ರವರ ಪರಂಪರೆಯನ್ನು ಅನ್ವೇಷಿಸುತ್ತವೆ ಮತ್ತು ಧ್ಯಾನ, ಮೌನ ಹಾಗೂ ಆಲಿಸುವ ಮನೋಭಾವವನ್ನು ಆತ್ಮೀಯ ಹಾಗೂ ಮಾನವೀಯ ನವೀಕರಣದ ಮಾರ್ಗಗಳಾಗಿ ಅನುಭವಿಸಲು ಭೇಟಿದಾರರನ್ನು ಆಹ್ವಾನಿಸುತ್ತವೆ.

ಸಾಂತಾ ಮರಿಯಾ ಔಸಿಲಿಯಾತ್ರಿಚೆ ಸಂಕೀರ್ಣದಲ್ಲಿರುವ ಪೆವಿಲಿಯನ್ ಅನ್ನು “ಆಧುನಿಕ ಸ್ಕ್ರಿಪ್ಟೋರಿಯಂ” ಎಂಬ ರೂಪದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದು ಸ್ಥಾಪನೆಗಳು, ಜೀವಂತ ದಾಖಲೆಗಳು ಮತ್ತು 24 ಕಲಾವಿದರ ಕೃತಿಗಳ ಮೂಲಕ ಸಂತ ಹಿಲ್ಡೆಗಾರ್ಡ್ ಅವರ ಆತ್ಮೀಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಅನ್ವೇಷಿಸುತ್ತದೆ. ಈ ಯೋಜನೆ ಜರ್ಮನ್ ಚಲನಚಿತ್ರ ನಿರ್ದೇಶಕ ಮತ್ತು ಚಿಂತಕ ಅಲೆಕ್ಸಾಂಡರ್ ಕ್ಲೂಗೆ ರವರಿಂದ ಪ್ರೇರಿತವಾಗಿದೆ.

ಉದ್ಘಾಟನಾ ಸಮಾರಂಭದಲ್ಲಿ ಕಾರ್ಡಿನಲ್ ಜೋಸ್ ಟೊಲೆಂಟಿನೋ ಡಿ ಮೆಂಡೋನ್ಸಾ, ವೆನಿಸ್‌ನ ಪಿತಾಮಹ ಫ್ರಾನ್ಸೆಸ್ಕೊ ಮೊರಾಗ್ಲಿಯಾ, ಬಿಯೆನ್ನಾಲೆ ಅಧ್ಯಕ್ಷ ಪಿಯೆಟ್ರಾಂಜೆಲೊ ಬುಟ್ಟಫುಕೊ ಹಾಗೂ ವೆನಿಸ್ ಮೇಯರ್ ಲುಯಿಗಿ ಬ್ರುಗ್ನಾರೊ ಉಪಸ್ಥಿತರಿದ್ದರು.

ಗಾಯಕಿ ಮತ್ತು ಗೀತರಚನೆಕಾರ್ತಿ ಪ್ಯಾಟಿ ಸ್ಮಿತ್ ಸಹ ಅಚ್ಚರಿಯ ರೀತಿಯಲ್ಲಿ ಸಮಾರಂಭದಲ್ಲಿ ಭಾಗವಹಿಸಿ, ನಂತರ ಕನ್ನಾರೆಜಿಯೊ ಕೇಂದ್ರದಲ್ಲಿ ಸೌಂಡ್ವಾಕ್ ಕಲೆಕ್ಟಿವ್ ಜೊತೆಗೆ ಸಿದ್ಧಪಡಿಸಿದ “ಸೋನಿಕ್ ಪ್ರಾರ್ಥನೆ" ಸಂಗೀತ ಪ್ರದರ್ಶನವನ್ನು ನೀಡಿದರು.

ತಮ್ಮ ಭಾಷಣದಲ್ಲಿ ಕಾರ್ಡಿನಲ್ ಟೋಲೆಂಟಿನೊ ದೆ ಮೆಂಡೋಂಸಾ, ಇಂದಿನ ವೇಗಭರಿತ ಮತ್ತು ಗದ್ದಲಮಯ ಸಮಾಜಕ್ಕೆ ಪ್ರತಿಕ್ರಿಯೆಯಾಗಿ ಈ ಪೆವಿಲಿಯನ್ ಧ್ಯಾನ, ಮೌನ ಮತ್ತು ಆಲಿಸುವ ಮನೋಭಾವವನ್ನು ಮರುಹುಡುಕಲು ಆಹ್ವಾನಿಸುತ್ತಿದೆ ಎಂದು ಹೇಳಿದರು.

ಜಗದ್ಗುರು XIVನೇ ಲಿಯೋರವರ “ಜೀವನದ ಲಯಕ್ಕೆ, ಸೃಷ್ಟಿಯ ಸೌಹಾರ್ದತೆಗೆ ಮತ್ತು ಅದರ ಗಾಯಗಳನ್ನು ಗುಣಪಡಿಸುವ ಸೇವೆಗೆ ಮರಳಬೇಕು” ಎಂಬ ಮಾತುಗಳನ್ನು ಸ್ಮರಿಸಿದ ಅವರು, ಈ ಆಲೋಚನೆಗಳೇ ಜಗದ್ಗುರುಗಳು ಲಿಯೋರವರು ಬಿಯೆನ್ನಾಲೆ ಪಾಲ್ಗೊಳ್ಳುವಿಕೆಗೆ ಮಾರ್ಗದರ್ಶಿಯಾಗಿವೆ ಎಂದು ಹೇಳಿದರು.

12ನೇ ಶತಮಾನದಲ್ಲಿ ಬದುಕಿದ್ದರೂ ಸಂತ ಹಿಲ್ಡೆಗಾರ್ಡ್ “ಇಂದಿನ ಕಾಲಕ್ಕೂ ಅತ್ಯಂತ ಸಮಕಾಲೀನ ಧ್ವನಿ” ಎಂದು ಅವರು ವಿವರಿಸಿದರು. ಇಂದಿನ ಪ್ರಶ್ನೆಗಳು ಮತ್ತು ಸವಾಲುಗಳಿಗೆ ಬೆಳಕು ಚೆಲ್ಲುವ ಸಾಮರ್ಥ್ಯವು ಅವರಲ್ಲಿದೆ ಎಂದು ಹೇಳಿದರು. ಸಹೋದರತ್ವ, ಆತ್ಮೀಯತೆ ಮತ್ತು ಪರಸ್ಪರ ಮಮತೆಯತ್ತ ಹೊಸ ದಾರಿಗಳನ್ನು ಕಲ್ಪಿಸಬಲ್ಲ “ಸಾಂಸ್ಕೃತಿಕ ಪ್ರವಾದಿಗಳ” ಅಗತ್ಯ ಇಂದಿನ ಜಗತ್ತಿಗೆ ಇದೆ ಎಂದು ಅವರು ಹೇಳಿದರು.

2012ರಲ್ಲಿ ಜಗದ್ಗುರು XVIನೇ ಬೆನೆಡಿಕ್ಟ್ ರವರು ಸಂತ ಹಿಲ್ಡೆಗಾರ್ಡ್ ರವರನ್ನು ಸಭೆಯ ಡಾಕ್ಟರ್ ಎಂದು ಘೋಷಿಸಿದ್ದನ್ನು ಸ್ಮರಿಸಿದ ಕಾರ್ಡಿನಲ್, ಎಲ್ಲಾ ಸೃಷ್ಟಿಯೂ ದೇವರ ಪ್ರೀತಿಯ ಕ್ರಿಯೆಯೇ ಎಂಬ ಅವರ ನಂಬಿಕೆಯನ್ನು ಉಲ್ಲೇಖಿಸಿದರು. ಪ್ರೀತಿ ಇಲ್ಲದಿದ್ದರೆ ಜಗತ್ತು ಆತ್ಮೀಯವಾಗಿ ಬತ್ತಿಹೋಗುವ ಅಪಾಯವಿದೆ ಎಂದು ಅವರು ಎಚ್ಚರಿಸಿದರು.

ಪಿತಾಮಹ ಫ್ರಾಂಚೆಸ್ಕೊ ಮೊರಾಲಿಯಾ, ಸಂತ ಹಿಲ್ಡೆಗಾರ್ಡ್ ಅವರ ಆತ್ಮೀಯತೆಯಲ್ಲಿಯೂ ಬೆನೆಡಿಕ್ಟೈನ್ ಪರಂಪರೆಯಲ್ಲಿಯೂ “ಆಲಿಸುವಿಕೆ”ಯ ಮಹತ್ವವನ್ನು ಒತ್ತಿಹೇಳಿದರು. ಸಂತ ಬೆನೆಡಿಕ್ಟ್ ನಿಯಮದ ಆರಂಭಿಕ ಮಾತುಗಳಾದ “ನನ್ನ ಮಗನೇ, ಗುರುಗಳ ಬೋಧನೆಯನ್ನು ಆಲಿಸು” ಎಂಬುದನ್ನು ಉಲ್ಲೇಖಿಸಿದ ಅವರು, ದೇವರನ್ನು ಭೇಟಿಯಾಗುವ ವಿಶೇಷ ಸ್ಥಳವೇ ಆಲಿಸುವಿಕೆಯಾಗಿದೆ ಎಂದು ಹೇಳಿದರು. ದೇವರು ಗದ್ದಲದ ಮೂಲಕವಲ್ಲ, ಮೌನದ ಸೂಕ್ಷ್ಮ ಧ್ವನಿಯ ಮೂಲಕ ಮಾತನಾಡುತ್ತಾನೆ ಎಂದು ವಿವರಿಸಿದರು.

ಸಂತ ಹಿಲ್ಡೆಗಾರ್ಡ್ ಅವರ ದೃಷ್ಟಿಯಲ್ಲಿ, ಆಲಿಸುವಿಕೆ, ಧ್ವನಿ ಮತ್ತು ಮೌನವು ಮಾನವ, ಪ್ರಕೃತಿ ಮತ್ತು ದೇವರ ನಡುವಿನ ಆಳವಾದ ಸಂಬಂಧವನ್ನು ಬಹಿರಂಗಪಡಿಸುತ್ತವೆ ಎಂದು ಪಿತಾಮಹ ಹೇಳಿದರು. ಅನಗತ್ಯ ಗದ್ದಲದಿಂದ ತುಂಬಿರುವ ಇಂದಿನ ಜಗತ್ತಿನಲ್ಲಿ, “ಆಲಿಸಲು ಬಲ್ಲವರೇ ನಿಜವಾಗಿ ಅರ್ಥಮಾಡಿಕೊಳ್ಳಬಲ್ಲರು; ನಿಜವಾದ ಸೌಹಾರ್ದತೆ ಮೌನದಿಂದಲೇ ಹುಟ್ಟುತ್ತದೆ” ಎಂಬ ಅವರ ಸಂದೇಶ ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ ಎಂದು ಹೇಳಿದರು.

ಬಿಯೆನ್ನಾಲೆ ಅಧ್ಯಕ್ಷ ಬುತ್ತಾಫೂಕೋ, ಆತ್ಮಸ್ವಾತಂತ್ರ್ಯ ಮತ್ತು ಚಿಂತನೆಗೆ ಉತ್ತೇಜನ ನೀಡುತ್ತಿರುವ ಜಗದ್ಗುರುಗಳ ಅಧಿಕಾರ ಸ್ಥಳದ ಪೆವಿಲಿಯನ್ ಅನ್ನು ಶ್ಲಾಘಿಸಿದರು. ಅವರು ಹಾಗೂ ಮೇಯರ್ ಬ್ರುಞಾರೊ ಇಬ್ಬರೂ ಜನಾಂಗಗಳ ನಡುವೆ ಶಾಂತಿ ಮತ್ತು ಸಂವಾದವನ್ನು ಉತ್ತೇಜಿಸುವಲ್ಲಿ ಜಗದ್ಗುರುಗಳ ಅಧಿಕಾರ ಸ್ಥಳದ ಕೊಡುಗೆಯನ್ನು ಮೆಚ್ಚಿದರು.

ಇದಲ್ಲದೆ, ಭವಿಷ್ಯದಲ್ಲಿ ಜಗದ್ಗುರು XIVನೇ ಲಿಯೋರವರು ವೆನಿಸ್ ನಗರಕ್ಕೆ ಭೇಟಿ ನೀಡಲಿ ಎಂಬ ಆಶಯವನ್ನೂ ಅವರು ವ್ಯಕ್ತಪಡಿಸಿದರು.

09 ಮೇ 2026, 16:49