ತಂಜಾನಿಯಾದಲ್ಲಿ ಕಾರ್ಮೆಲೈಟ್ ಸಭೆಯ ಪ್ರಧಾನ ಶ್ರೇಷ್ಠಾಧಿಕಾರಿ ಮತ್ತು ಮೂವರು ಧಾರ್ಮಿಕ ಭಗಿನಿಯರ ನಿಧನಕ್ಕೆ ಧರ್ಮಪ್ರಚಾರಕರ ಸಂತಾಪ
ಸಿಸ್ಟರ್ ಕ್ರಿಸ್ಟೀನ್ ಮಾಸಿವೊ, CPS
ತಂಜಾನಿಯಾದ ಮ್ವಾನ್ಜಾದಲ್ಲಿ ರಾತ್ರಿ 11:00ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ, ಐದು ಧಾರ್ಮಿಕ ಭಗಿನಿಯರು ಮತ್ತು ಅವರ ಚಾಲಕನನ್ನು ಹೊತ್ತೊಯ್ಯುತ್ತಿದ್ದ ವಾಹನವು ದಾರ್ ಎಸ್ ಸಲಾಮ್ಗೆ ಪ್ರಯಾಣಕ್ಕಾಗಿ ಮ್ವಾನ್ಜಾ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಲಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಮೃತಪಟ್ಟ ಐವರು ಕಾರ್ಮೆಲೈಟ್ ಮಿಷನರಿ ಸಿಸ್ಟರ್ಸ್ ಆಫ್ ಸೇಂಟ್ ಥೆರೆಸ್ ಆಫ್ ದಿ ಚೈಲ್ಡ್ ಜೀಸಸ್-MCSTನ/ ಬಾಲ-ಯೇಸುವಿನ ಸಂತ ಥೆರೆಸ್ರವರ ಕಾರ್ಮೆಲೈಟ್ ಸಭೆಯ ಧರ್ಮಪ್ರಚಾರಕ ಧಾರ್ಮಿಕ ಭಗಿನಿಯರ, ಸಭೆಯ ಪ್ರಧಾನ ಶ್ರೇಷ್ಠಾಧಿಕಾರಿ ಸಿಸ್ಟರ್ ಲಿಲಿಯನ್ ಕಪೊಂಗೊ, ಸಭೆಯ ಪ್ರಧಾನ ಕಾರ್ಯದರ್ಶಿ ಸಿಸ್ಟರ್ ನೆರಿನಾ, ಸಿಸ್ಟರ್ ಡಮರಿಸ್ ಮಾಥೆಕಾ, ಸಿಸ್ಟರ್ ಸ್ಟೆಲ್ಲಾಮರಿಸ್ ಮತ್ತು ಅವರ ಚಾಲಕ.
ಅಪಘಾತದಲ್ಲಿ ಒಬ್ಬ ಸಹೋದರಿ ಬದುಕುಳಿದರು ಆದರೆ ತೀವ್ರವಾಗಿ ಗಾಯಗೊಂಡರು ಮತ್ತು ಪ್ರಸ್ತುತ ಮ್ವಾನ್ಜಾದ ಬುಗಾಂಡೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಹೋದರಿಯರು ತಮ್ಮ ಮೂವರು ಸದಸ್ಯರ ಸಭೆಯ ಶಾಶ್ವತ ಪ್ರಮಾಣದ ಸ್ವೀಕಾರಕ್ಕಾಗಿ ಧರ್ಮಕ್ಷೇತ್ರದಲ್ಲಿದ್ದರು, ಅದು ಶನಿವಾರ ನಡೆದ ಸಂತೋಷದಾಯಕ ಆಚರಣೆಯಾಗಿತ್ತು.
ಸೆಪ್ಟೆಂಬರ್ 15, ಭಾನುವಾರ ಬೆಳಿಗ್ಗೆ, ಅವರು ಮ್ವಾನ್ಜಾ ಕಡೆಗೆ ಪ್ರಯಾಣಿಸುವ ಮೊದಲು ವಿದಾಯ ಹೇಳಲು ಕಹಾಮಾದಲ್ಲಿರುವ ಧರ್ಮಾಧ್ಯಕ್ಷರ ನಿವಾಸಕ್ಕೆ ಭೇಟಿ ನೀಡಿದರು. ಬುಕುಂಬಿ–ಮ್ವಾನ್ಜಾದಿಂದ ವಿಮಾನ ನಿಲ್ದಾಣಕ್ಕೆ ಅವರ ಕೊನೆಯ ಹಂತದ ಪ್ರಯಾಣದ ಸಮಯದಲ್ಲಿ, ಅಪಘಾತ ಸಂಭವಿಸಿತು.
ವ್ಯಾಟಿಕನ್ ಸುದ್ದಿ ಜೊತೆ ಮಾತನಾಡಿದ ಡಾರ್ ಎಸ್ ಸಲಾಮ್ನ ಮಹಾಧರ್ಮಾಧ್ಯಕ್ಷರಾದ ಜೂಡ್ ಥಡ್ಡಾಯಿಯಸ್ ರುವಾಯ್ಚಿ, ಒ.ಎಫ್.ಎಂ. ಕ್ಯಾಪ್ಟನ್ ರವರು, ತಮ್ಮ ತೀವ್ರ ದುಃಖವನ್ನು ವ್ಯಕ್ತಪಡಿಸಿದರು. ಈ ಅಪಘಾತವನ್ನು ಕಾರ್ಮೆಲೈಟ್ ಸಭೆಯ ಧರ್ಮಪ್ರಚಾರಕ ಧಾರ್ಮಿಕ ಭಗಿನಿಯರಿಗೆ ಮಾತ್ರವಲ್ಲದೆ ತಂಜಾನಿಯಾದ ಇಡೀ ದೇವರ ಜನರಿಗೆ ಭಾರಿ ನಷ್ಟ ಎಂದು ಕರೆದರು.
ಕಾರ್ಮೆಲೈಟ್ ಮಿಷನರಿ ಸಿಸ್ಟರ್ಗಳ ಬಗ್ಗೆ
ಲಿಸಿಯಕ್ಸ್ನ ಸಂತ ಥೆರೆಸ್ರವರ ಸಾಧಾರಣ ಜೀವನ ಶೈಲಿಯಿಂದ ಪ್ರೇರಿತರಾದ, ಬಾಲ-ಯೇಸುವಿನ ಸಂತ ಥೆರೆಸ್ರವರ ಕಾರ್ಮೆಲೈಟ್ ಸಭೆಯ ಧರ್ಮಪ್ರಚಾರಕ ಧಾರ್ಮಿಕ ಭಗಿನಿಯರು, ಬಡವರು ಮತ್ತು ದುರ್ಬಲರಲ್ಲಿ ಪಾಲನಾ ಸೇವೆ, ಶಿಕ್ಷಣ ಮತ್ತು ಧರ್ಮಪ್ರಚಾರಕ ಸೇವೆಗೆ ಸಮರ್ಪಿತವಾಗಿದೆ.
ಅವರ ಹಠಾತ್ ನಿಧನವು ಸಭೆಯೊಳಗೆ ಮತ್ತು ಅವರು ಸೇವೆ ಸಲ್ಲಿಸುತ್ತಿರುವ ಧರ್ಮಕ್ಷೇತ್ರಗಳಲ್ಲಿ ಆಳವಾಗಿ ಅತೀವ ದುಃಖವನ್ನು ಅನುಭವಿಸುತ್ತಿದೆ.
ಅಂತ್ಯಕ್ರಿಯೆ ಮತ್ತು ಅವರ ಸ್ಮರಣಾರ್ಥದ ವ್ಯವಸ್ಥೆಗಳನ್ನು ಸಭೆಯು ಸರಿಯಾದ ಸಮಯದಲ್ಲಿ ತಿಳಿಸಲಾಗುತ್ತದೆ.