ಕಾರ್ಡಿನಲ್ ಪಿಜ್ಜಬಲ್ಲಾ: ಶಾಂತಿ ಸಾಧಿಸಲು, ನಾವು ಇತರರ ನೋವುಗಳಿಗೆ ಸ್ಪಂದಿಸಬೇಕು
ಆಂಡ್ರಿಯಾ ಟೋರ್ನಿಯೆಲ್ಲಿ ಮತ್ತು ಫ್ರಾನ್ಸೆಸ್ಕಾ ಸಬಟಿನೆಲ್ಲಿ
ಗಾಜಾ ಇಸ್ರಯೇಲ್ ಬಾಂಬ್ ದಾಳಿಗೆ ಒಳಗಾಗಿದೆ, ಕೆಲವೇ ಗಂಟೆಗಳ ಹಿಂದೆಯೂ ಸಹ. ಎರಡು-ರಾಜ್ಯಗಳ ಕಲಹಗಳಿಗೆ ಪರಿಹಾರವನ್ನು ಸಾಧಿಸುವ ಗುರಿಯನ್ನು ಹೊಂದಿರುವ ರಾಜಕೀಯ ಪ್ರಕ್ರಿಯೆಗೆ ಕಾರಣವಾಗುವ ಅಮೆರಿಕದ ಯೋಜನೆಯು ಎರಡನೇ ಹಂತದತ್ತ ಸಾಗುವುದು ನಿರ್ಣಾಯಕವಾಗಿದೆ.
ಭದ್ರತಾ ಮಂಡಳಿಯು ನಿರ್ಣಯವನ್ನು ಅಂಗೀಕರಿಸಿದ ನಂತರ, ವಿಶ್ವಸಂಸ್ಥೆಯು ಮುಂದುವರಿಯಲು ಮತ್ತು ರಾಜತಾಂತ್ರಿಕ ಆವೇಗವನ್ನು ನೆಲದ ಮೇಲೆ ದೃಢವಾದ ಮತ್ತು ತುರ್ತು ಕ್ರಮಗಳಾಗಿ ಭಾಷಾಂತರಿಸಲು ಬದ್ಧವಾಗಿದೆ. ಈ ದೃಢವಾದ ಕ್ರಮಗಳು ಯುದ್ಧ ಮತ್ತು ವಿನಾಶದಿಂದ ದಣಿದ ಪ್ಯಾಲಸ್ತೀನಿಯದವರಿಗೆ ಒಂದು ಮಹತ್ವದ ತಿರುವು ಆಗಬಹುದೆಂದು ಹಲವರು ಆಶಿಸುವ ಹಂತಗಳ ರೂಪವನ್ನು ತೆಗೆದುಕೊಳ್ಳಬೇಕು.
ವ್ಯಾಟಿಕನ್ ಸುದ್ದಿಯವರ ಜೊತೆ ಮಾತನಾಡಿದ ಜೆರುಸಲೇಮ್ನ ಲತೀನ್ ಪಿತೃಪ್ರಧಾನರು, ಕಾರ್ಡಿನಲ್ ಪಿಯರ್ಬಟಿಸ್ಟಾ ಪಿಜ್ಜಬಲ್ಲಾರವರು, ಎರಡು ವರ್ಷಗಳ ಬಾಂಬ್ ದಾಳಿಯಿಂದ ತತ್ತರಿಸುತ್ತಿರುವ ಮತ್ತು ಈಗ ಕಠಿಣ ಚಳಿಗಾಲದ ಪರಿಸ್ಥಿತಿಗಳನ್ನು ಅನುಭವಿಸುತ್ತಿರುವ ಜನರಿಗೆ ಪರಿಹಾರವನ್ನು ತರುವಂತಹ ಪರಿಹಾರಗಳನ್ನು ಜಾರಿಗೆ ತರಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸುತ್ತಾರೆ.
ಪ್ರಶ್ನೆ-ಮಾನ್ಯರೇ, ರಷ್ಯಾ ಮತ್ತು ಚೀನಾ ಮತದಾನದಿಂದ ದೂರ ಉಳಿದಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರಸ್ತಾಪಿಸಿದ ಗಾಜಾ ಶಾಂತಿ ಯೋಜನೆಯ ಪರವಾಗಿ ಮತ ಚಲಾಯಿಸಿದೆ. ಪ್ಯಾಲಸ್ತೀನಿನ ರಾಜ್ಯವು ಈ ಯೋಜನೆಯನ್ನು ಅನುಮೋದಿಸುತ್ತದೆ, ಆದರೆ ಹಮಾಸ್ ಆ ಪರಿಸ್ಥಿತಿಗಳಲ್ಲಿ ನಿಶ್ಯಸ್ತ್ರಗೊಳಿಸುವುದಿಲ್ಲ ಎಂದು ಹೇಳುತ್ತದೆ. ವಿಶ್ವಸಂಸ್ಥೆಯ ನಿರ್ಧಾರಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಮತ್ತು ಪ್ರಸ್ತುತ ಪರಿಸ್ಥಿತಿಯನ್ನು ನೀವು ಹೇಗೆ ನೋಡುತ್ತೀರಿ? ಭರವಸೆಯಿದೆಯೇ?
ವಿಶ್ವಸಂಸ್ಥೆಯ ನಿರ್ಧಾರವು ಏನನ್ನೂ ಬದಲಾಯಿಸುವುದಿಲ್ಲ, ಆದರೆ ಅದು ಅಂತರರಾಷ್ಟ್ರೀಯ ಸಮುದಾಯದ ಮನ್ನಣೆಯಾಗಿದೆ. ಎಲ್ಲಾ ಯೋಜನೆಗಳಂತೆ, ಇದು ಎಂದಿಗೂ ಪರಿಪೂರ್ಣವಾಗಲು ಸಾಧ್ಯವಿಲ್ಲ. ಇದುವರೆಗೆ ಯುದ್ಧದ ವಿಸ್ತರಣೆಯನ್ನು ನಿಲ್ಲಿಸಿರುವುದು, ಪ್ಯಾಲಸ್ತೀನಿಯದ ಜನತೆಗೆ ಮತ್ತು ಅವರಿಗೆ ಮಾತ್ರವಲ್ಲ, ಎಲ್ಲರಿಗೂ ಕನಿಷ್ಠ ಪಕ್ಷ ಒಂದು ಭರವಸೆಯ ಬೆಳಕನ್ನು ನೀಡಬಲ್ಲ ಏಕೈಕ ಯೋಜನೆಯಾಗಿದೆ. ವಿಶ್ವಸಂಸ್ಥೆಯ ಸಹಕಾರವು ಅಂತರರಾಷ್ಟ್ರೀಯ ಸಮುದಾಯದ ಸಾಮಾನ್ಯ ಅನುಮೋದನೆಯಾಗಿದೆ ಎಂದು ನಾವು ಹೇಳಬಹುದು, ಅದು ಭೌತಿಕವಾಗಿ ಏನನ್ನೂ ಬದಲಾಯಿಸದಿದ್ದರೂ, ಆದರ್ಶ ಮತ್ತು ರಾಜಕೀಯ ದೃಷ್ಟಿಕೋನದಿಂದ ಇದು ಇನ್ನೂ ಮುಖ್ಯವಾಗಿದೆ.
ಪ್ರಶ್ನೆ-ಪೂಜ್ಯರೇ, ನೀವು ಇತ್ತೀಚೆಗೆ ಪವಿತ್ರ ನಾಡಿಗೆ ತೀರ್ಥಯಾತ್ರೆಗಳನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದೀರಿ, ಆದರೆ ಇವು ಇನ್ನೂ ಸ್ಥಗಿತಗೊಂಡಿವೆ - ಪ್ಯಾಲಸ್ತೀನಿಯದ ಆರ್ಥಿಕತೆಗೆ, ವಿಶೇಷವಾಗಿ ಕ್ರೈಸ್ತರಿಗೆ ಗಂಭೀರ ಪರಿಣಾಮಗಳನ್ನು ಬೀರುತ್ತವೆ. ಇದರ ಬಗ್ಗೆ ನೀವು ಮಾತನಾಡಬಲ್ಲಿರಾ? ಪ್ರಭುಯೇಸು ವಾಸಿಸಿದ, ಮರಣ ಹೊಂದಿದ ಮತ್ತು ಪುನರುತ್ಥಾನ ಹೊಂದಿದ್ದ ಸ್ಥಳಗಳಿಗೆ ಯಾತ್ರಿಕರು ಹಿಂತಿರುಗುವಂತೆ ನಿಮ್ಮ ಆಹ್ವಾನವನ್ನು ನವೀಕರಿಸಬಹುದೇ?
ಖಂಡಿತ! ನಾವು ಗಾಜಾ ಮತ್ತು ಪಶ್ಚಿಮ ದಂಡೆಯ ಬಗ್ಗೆ ಮಾತನಾಡುತ್ತೇವೆ, ಆದರೆ ಆ ಪ್ರದೇಶಗಳು ಸಾಮಾನ್ಯವಾಗಿ ಯಾತ್ರಿಕರ ಸಾಮಾನ್ಯ ಪ್ರಯಾಣದ ಭಾಗವಾಗಿರುವುದಿಲ್ಲ. ಯಾತ್ರಿಕರಿಗೆ ಬಹಳ ಮುಖ್ಯವಾದ ಬೆತ್ಲಹೇಮ್ ಪ್ರದೇಶಕ್ಕೆ ಅವರ ಉಪಸ್ಥಿತಿಯ ಅಗತ್ಯವಿದೆ ಮತ್ತು ತೀರ್ಥಯಾತ್ರೆಗಳು ಈಗ ಸುರಕ್ಷಿತವಾಗಿವೆ. ಕದನ ವಿರಾಮದೊಂದಿಗೆ, ಗಾಜಾದಲ್ಲಿ ಬಾಂಬ್ ದಾಳಿಗಳು ಮಾತ್ರವಲ್ಲದೆ, ಯೆಮೆನ್ನಿಂದ ಕ್ಷಿಪಣಿ ದಾಳಿಗಳು ಸಹ ನಿಂತಿವೆ. ಈಗ ತೀರ್ಥಯಾತ್ರೆ ಮಾಡುವುದು ಸುರಕ್ಷಿತವಾಗಿದೆ.
ಪವಿತ್ರ ನಾಡಿಗೆ ಬೇಟಿ ನೀಡಿರುವ ಕೆಲವರು ಇದನ್ನು ಸ್ವತಃ ನೋಡಿದ್ದಾರೆ. ನಾನು ಪುನರಾವರ್ತಿಸುತ್ತೇನೆ: ಸಾರ್ವತ್ರಿಕ ಧರ್ಮಸಭೆ, ಈ ವರ್ಷಗಳಲ್ಲಿ ಪ್ರಾರ್ಥನೆ ಮತ್ತು ದೃಢವಾದ ಒಗ್ಗಟ್ಟಿನ ಮೂಲಕ ನಮಗೆ ತುಂಬಾ ಹತ್ತಿರವಾಗಿದೆ. ಆದರೆ ಈಗ ಒಂದು ಹೊಸ ಹಂತದ ಅಗತ್ಯವಿದೆ, ಭೌತಿಕ ಉಪಸ್ಥಿತಿಯ ಮೂಲಕವೂ ದೃಢವಾದ ಸಹಾಯವನ್ನು ತೋರಿಸಲಾಗುತ್ತದೆ. ಇದು ಯಾತ್ರಿಕರಿಗೆ ಆಧ್ಯಾತ್ಮಿಕ ಪ್ರಯೋಜನವನ್ನು ತರುವುದಲ್ಲದೆ, ಆರ್ಥಿಕ ಸಹಾಯದ ಜೊತೆಗೆ, ಪವಿತ್ರ ನಾಡಿನಲ್ಲಿ ತಮ್ಮ ಕ್ರೈಸ್ತ ಸಹೋದರ ಸಹೋದರಿಯರನ್ನು ಕಾಣಲು ಬಯಸುವ ಅನೇಕ ಕುಟುಂಬಗಳಲ್ಲಿ ಹರ್ಷವನ್ನು ತರುತ್ತದೆ.
ನಾವು ಜ್ಯೂಬಿಲಿ ವರ್ಷದಲ್ಲಿದ್ದೇವೆ, ಅದು ಮಾತ್ರವಲ್ಲದೆ, ಈ ಜ್ಯೂಬಿಲಿ ವರ್ಷವು ಕೊನೆಗೊಳ್ಳುತ್ತಿದೆ. ಇದು ರೋಮ್ ಮತ್ತು ಜೆರುಸಲೇಮ್ ಎರಡರ ಕಡೆಗೆ ಗಮನ ಸೆಳೆಯುತ್ತದೆ ಎಂದು ಹಲವರು ಆಶಿಸಿದರು. ಈ ಎರಡು ನಗರಗಳು ಒಂದಕ್ಕೊಂದು ಬದ್ಧವಾಗಿವೆ. ಮುಂದಿನ ಜ್ಯೂಬಿಲಿಗಾಗಿ ನಾವು ಕಾಯಲು ಸಾಧ್ಯವಿಲ್ಲ, ನಾವು ಈಗ ಪವಿತ್ರ ಪ್ರಯಾಣವನ್ನು ಪುನರಾರಂಭಿಸಬೇಕು ಮತ್ತು ನಮ್ಮ ವಿಶ್ವಾಸದ ಮೂಲಗಳಿಗೆ ಮರಳಬೇಕು, ಇದು ಒಗ್ಗಟ್ಟು ಮತ್ತು ಕ್ರೈಸ್ತ ಭ್ರಾತೃತ್ವದ ಒಂದು ರೂಪವಾಗಿದೆ.