ಕಾನ್ಸಿಸ್ಟರಿಯಲ್ಲಿ ಪೋಪ್: ನಮ್ಮನ್ನು ಆಕರ್ಷಿಸುವುದು ಕ್ರಿಸ್ತನೇ ಹೊರತು ಧರ್ಮಸಭೆ ಅಲ್ಲ
ವ್ಯಾಟಿಕನ್ ವರದಿ
ಜನವರಿ 7–8ರಂದು ವಾಟಿಕನ್ನಲ್ಲಿ ನಡೆದ ಕಾರ್ಡಿನಲ್ಗಳ ಅಸಾಮಾನ್ಯ ಕಾನ್ಸಿಸ್ಟರಿಯನ್ನು ಉದ್ಘಾಟಿಸುತ್ತಾ, ಜಗದ್ಗುರು XIVನೇ ಲಿಯೋರವರು ನಾನು ಕೇಳಲು ಇಲ್ಲಿದ್ದೇನೆ ಎಂದು ಹೇಳಿದರು. ದೈವದಶ೯ನದ ಹಬ್ಬದ ಮುಂದಿನ ದಿನವೇ ರೋಮ್ಗೆ ಆಗಮಿಸಿದ ಕಾರ್ಡಿನಲ್ಗಳನ್ನು ಸ್ವಾಗತಿಸಿದ ಅವರು, ಈ ಎರಡು ಗಂಭೀರ ಮಹತ್ವದ ದಿನಗಳ ಚಿಂತನ ಮತ್ತು ಸಂವಾದದಲ್ಲಿ ಪವಿತ್ರಾತ್ಮರು ಅವರನ್ನು ಮಾರ್ಗದರ್ಶಿಸಲಿ ಎಂದು ಪ್ರಾರ್ಥಿಸಿದರು. ಒಂದೂವರೆ ದಿನಗಳ ಈ ಸಭೆ ಧರ್ಮ ಸಭೆಯ ಮುಂದಿನ ಪ್ರಯಾಣಕ್ಕೆ ದಾರಿ ತೋರಿಸಲಿದೆ ಎಂದು ಅವರು ಹೇಳಿದರು.
ಈ ಸಭೆಯ ಉದ್ದೇಶ ಯಾವುದೋ ಅಂತಿಮ ಪಠ್ಯಕ್ಕೆ ತಲುಪುವುದಲ್ಲ, ಬದಲಾಗಿ ಸಂಪೂರ್ಣ ಧರ್ಮ ಸಭೆಯ ಸೇವಾ ಗುರಿಯನ್ನು ನೆರವೇರಿಸಲು ಸಹಾಯಕವಾಗುವ ನಿರಂತರ ಸಂಭಾಷಣೆಯನ್ನು ಮುಂದುವರಿಸುವುದು ಎಂದು ಜಗದ್ಗುರುಗಳು ಸ್ಪಷ್ಟಪಡಿಸಿದರು. ಕಾರ್ಡಿನಲ್ಗಳ ಮಹಾವಿದ್ಯಾಲಯವು ವಿವಿಧ ಹಿನ್ನೆಲೆಗಳು, ಸಂಸ್ಕೃತಿಗಳು, ಧಾರ್ಮಿಕ ಮತ್ತು ಸಾಮಾಜಿಕ ಪರಂಪರೆಗಳು, ವಿದ್ಯಾಭ್ಯಾಸ ಹಾಗೂ ಪಾಲಕರ ಅನುಭವಗಳಿಂದ ಸಮೃದ್ಧವಾಗಿದೆ ಎಂದು ಗುರುತಿಸಿದ ಅವರು, ಪರಸ್ಪರ ತಿಳಿದುಕೊಂಡು ಸಂವಾದದ ಮೂಲಕ ಏಕತೆಯಲ್ಲಿ ಬೆಳೆಯಬೇಕೆಂದು ಹೇಳಿದರು.
ಜಗದ್ಗುರು XIV ನೇ ಲಿಯೋರವರು ದ್ವಿತೀಯ ವ್ಯಾಟಿಕನ್ ಮಹಾಸಭೆಯ ಮಹತ್ವವನ್ನು ನೆನಪಿಸಿ, ಜಗದ್ಗುರು XVI ನೇ ಬೆನೆಡಿಕ್ಟ್ ರವರು ಸೂಚಿಸಿದ್ದ ಆಕರ್ಷಣೆಗೆ ಚಾಲನೆ ನೀಡುವ ಶಕ್ತಿ ಕುರಿತು ಚಿಂತನೆಗೆ ಆಹ್ವಾನಿಸಿದರು. ಆ ಶಕ್ತಿ, ಕೃಪೆ,ಪ್ರೀತಿಯಾಗಿದ್ದು, ಯೇಸುಕ್ರಿಸ್ತನಲ್ಲಿ ಅವತಾರಗೊಂಡ ದೇವರ ಪ್ರೀತಿಯೇ ಪವಿತ್ರಾತ್ಮನ ಮೂಲಕ ಧರ್ಮ ಸಭೆಗೆ ನೀಡಲ್ಪಟ್ಟು ಅದರ ಎಲ್ಲಾ ಕಾರ್ಯಗಳನ್ನು ಪವಿತ್ರಗೊಳಿಸುತ್ತದೆ ಎಂದು ಅವರು ಹೇಳಿದರು. ಧರ್ಮ ಸಭೆ ಅಲ್ಲ, ಕ್ರಿಸ್ತನೇ ಆಕರ್ಷಿಸುತ್ತಾನೆ ಕ್ರೈಸ್ತರು ಅಥವಾ ಧರ್ಮ ಸಭೆಯ ಸಮುದಾಯ ಆಕರ್ಷಿಸುತ್ತಿದ್ದರೆ, ಅದು ರಕ್ಷಕರ ಹೃದಯದಿಂದ ಹರಿದುಬರುವ ದಾನಪ್ರೀತಿಯ ಜೀವಶಕ್ತಿಯ ಕಾರಣವೆಂದು ಅವರು ತಿಳಿಸಿದರು. ಏಕತೆ ಆಕರ್ಷಿಸುತ್ತದೆ, ವಿಭಜನೆ ಚದರಿಸುತ್ತದೆ ಎಂದು ಜಗದ್ಗುರುಗಳು ಎಚ್ಚರಿಸಿದರು.
ಈ ಕಾನ್ಸಿಸ್ಟರಿಯಲ್ಲಿ ಕಾರ್ಡಿನಲ್ಗಳು ಚರ್ಚೆ ಮಾಡಲು ನಾಲ್ಕು ವಿಷಯಗಳನ್ನು ಜಗದ್ಗುರುಗಳು ಸೂಚಿಸಿದರು ಇಂದಿನ ಜಗತ್ತಿನಲ್ಲಿ ಧರ್ಮ ಸಭೆಯ ಗುರಿ ಕುರಿತು ಎವಾಂಜೆಲಿ ಗೌಡಿಯಮ್ ವಿಶೇಷ ಚರ್ಚುಗಳಿಗೆ ಪವಿತ್ರ ಸಿಂಹಾಸನದ ಸೇವೆಯನ್ನು ವಿವರಿಸುವ ಎವಾಂಜೆಲಿಯ ಸಹಕಾರದ ಸಾಧನ, ಧರ್ಮಾಧಿಕಾರಿಗಳ ಆಲೋಚನಾ ಸಭೆ ಮತ್ತು ಕ್ರೈಸ್ತ ಜೀವನದ ಮೂಲ ಹಾಗೂ ಶಿಖರವಾದ ಆರಾಧನಾ ವಿಧಿ. ಸಮಯದ ಮಿತಿಯ ಕಾರಣದಿಂದ, ಮುಂದಿನ ಒಂದು ಅಥವಾ ಎರಡು ವರ್ಷಗಳ ದೃಷ್ಟಿಯಿಂದ ಜಗದ್ಗುರುಗಳು ಹಾಗೂ ಧರ್ಮ ಪ್ರಾಂತ್ಯದ ಕಾರ್ಯಕ್ಕೆ ಮಾರ್ಗದರ್ಶನ ನೀಡುವ ಆದ್ಯತೆಗಳ ಪ್ರಶ್ನೆಯೊಂದಿಗೆ, ಈ ವಿಷಯಗಳಲ್ಲಿ ಕೇವಲ ಎರಡು ವಿಷಯಗಳನ್ನು ಆಳವಾಗಿ ಚರ್ಚಿಸಲಾಗುತ್ತದೆ ಎಂದು ಅವರು ಹೇಳಿದರು.
ಕೊನೆಯಲ್ಲಿ, ಪರಸ್ಪರ ಗಮನವಿಟ್ಟು ಕೇಳುವುದು, ಪವಿತ್ರಾತ್ಮನ ಮಾರ್ಗದರ್ಶನವನ್ನು ಹುಡುಕುವುದು ಮತ್ತು ಸಹಯಾತ್ರೆಯಲ್ಲಿ ನಡೆಯುವುದು ತಮ್ಮ ಪೇತ್ರೀಯ ಸೇವೆಗೆ ಮುಂದೆಯೂ ಮಹತ್ತರ ಸಹಾಯವಾಗಲಿದೆ ಎಂದು ಜಗದ್ಗುರು XIVನೇ ಲಿಯೋರವರು ಹೇಳಿದರು. ಸಹೋದರತ್ವ ಮತ್ತು ನಿಜವಾದ ಸ್ನೇಹದ ಮನೋಭಾವದಲ್ಲಿ ಒಟ್ಟಾಗಿ ಕೆಲಸ ಮಾಡುವ ರೀತಿಯೇ ಹೊಸತನವನ್ನು ಹುಟ್ಟಿಸಬಲ್ಲದು ಎಂದು ಅವರು ಹೇಳಿದರು. ಅಂತಿಮವಾಗಿ, ಚರ್ಚ್ನ ತಾಯಿ ಪವಿತ್ರ ಕನ್ಯಾ ಮರಿಯ ದೃಷ್ಟಿಯಡಿಯಲ್ಲಿ, ಕಾರ್ಡಿನಲ್ಗಳ ಚಿಂತನೆಗಳಿಗೆ ಪವಿತ್ರಾತ್ಮರು ಮಾರ್ಗದರ್ಶನ ನೀಡಲಿ ಎಂದು ಅವರು ಪ್ರಾರ್ಥಿಸಿದರು.
