ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಜಗದ್ಗುರುಗಳು: ಧನ್ಯವಾಕ್ಯಗಳು ನಮಗೆ ಸಂತೋಷದ ಮಾನದಂಡವಾಗಬಹುದು
ವ್ಯಾಟಿಕನ್ ವರದಿ
ವ್ಯಾಟಿಕನ್ನಲ್ಲಿ ಭಾನುವಾರ ಮಧ್ಯಾಹ್ನ ನೀಡಿದ ತ್ರಿಕಾಲ ಪ್ರಾರ್ಥನೆಯ ಸಂದೇಶದಲ್ಲಿ, ಜಗತ್ತು ನಿರಾಶ್ರಿತರಂತೆ ತಳ್ಳಿಹಾಕುವವರಿಗೆ ದೇವರು ಭರವಸೆಯನ್ನು ನೀಡುತ್ತಾನೆ ಎಂದು ಜಗದ್ಗುರು XIVನೇ ಲಿಯೋರವರು ಸೂಚಿಸಿದರು.
ಆ ದಿನದ ಸುವಾರ್ತಾ ವಾಚನವಾದ ಸಂತ ಮತ್ತಾಯನ ಧನ್ಯವಾಕ್ಯಗಳನ್ನು ನೆನಪಿಸಿಕೊಂಡು, ಯೇಸು ಸಂಪೂರ್ಣ ಮಾನವಕುಲಕ್ಕೆ ಶುಭವಾರ್ತೆಯನ್ನು ಪ್ರಕಟಿಸುತ್ತಾರೆ ಎಂದು ಜಗದ್ಗರುಗಳು ಹೇಳಿದರು.
“ಇವುಗಳು ಇತಿಹಾಸದ ಅಂಧಕಾರದಲ್ಲಿ ಪ್ರಭುವು ಹಚ್ಚುವ ಬೆಳಕುಗಳಾಗಿವೆ. ಪವಿತ್ರಾತ್ಮನ ಶಕ್ತಿಯಿಂದ ಪುತ್ರನ ಮೂಲಕ ತಂದೆಯು ಸಾಧಿಸುವ ರಕ್ಷಣಾ ಯೋಜನೆಯನ್ನು ಅವುಗಳು ಪ್ರಕಟಿಸುತ್ತವೆ.
ನಮ್ಮ ಜೀವನವನ್ನು ನವೀಕರಿಸುತ್ತದೆ
ಪರ್ವತದ ಮೇಲೆ ಕ್ರಿಸ್ತನು ಶಿಷ್ಯರಿಗೆ ಹೊಸ ಧರ್ಮಶಾಸ್ತ್ರವನ್ನು ನೀಡುತ್ತಾನೆ. ಅದು ಕಲ್ಲಿನ ಮೇಲೆ ಬರೆಯಲ್ಪಟ್ಟದ್ದಲ್ಲ, ಹೃದಯದಲ್ಲಿ ಬರೆಯಲ್ಪಟ್ಟದ್ದು.
ಈ ಧರ್ಮಶಾಸ್ತ್ರವು ನಮ್ಮ ಜೀವನವನ್ನು ನವೀಕರಿಸುತ್ತದೆ ಮತ್ತು ಜಗತ್ತು ನಮಗೆ ವಿಫಲವಾದಂತೆ ಕಾಣಿಸಿದರೂ, ದುಃಖದಿಂದ ತುಂಬಿರುವಾಗಲೂ ನಮ್ಮ ಜೀವನವನ್ನು ಉತ್ತಮವಾಗಿಸುತ್ತದೆ ಎಂದು ಜಗದ್ಗುರುಗಳು ಹೇಳಿದರು.
ದೇವರೇ ಮಾತ್ರ ಬಡವರನ್ನೂ, ದುಃಖಿತರನ್ನೂ ನಿಜವಾಗಿ ಧನ್ಯರೆಂದು ಕರೆಯಬಲ್ಲರು ಎಂದು ಅವರು ಹೇಳಿದರು.
ಅವನು ಪರಮ ಮಂಗಳವಾಗಿದ್ದು, ಅನಂತ ಪ್ರೀತಿಯಿಂದ ಎಲ್ಲರಿಗೂ ತನ್ನನ್ನೇ ನೀಡುವವನು.
ಅವನೇ ಶಾಂತಿ ಮತ್ತು ನ್ಯಾಯವನ್ನು ಹುಡುಕುವವರನ್ನು ತೃಪ್ತಿಪಡಿಸಬಲ್ಲನು, ಏಕೆಂದರೆ ಅವನೇ ಲೋಕದ ನ್ಯಾಯಾಧೀಶನು ಮತ್ತು ಶಾಶ್ವತ ಶಾಂತಿಯ ಕರ್ತೃ ಎಂದು ಜಗದ್ಗುರುಗಳು ಮುಂದುವರೆಸಿ ಹೇಳಿದರು:
ದೇವರಲ್ಲಿ ಮಾತ್ರ ವಿನಯಿಗಳು, ದಯಾಳುಗಳು ಮತ್ತು ಶುದ್ಧ ಹೃದಯದವರು ಸಂತೋಷವನ್ನು ಕಂಡುಕೊಳ್ಳುತ್ತಾರೆ, ಏಕೆಂದರೆ ಅವನೇ ಅವರ ನಿರೀಕ್ಷೆಗಳ ಪರಿಪೂರ್ಣತೆ.
ಹಿಂಸೆಯಲ್ಲಿಯೂ ಅವರು ವಿಮೋಚನೆಯನ್ನು ಕಂಡುಕೊಳ್ಳುತ್ತಾರೆ ಸುಳ್ಳಿನ ಮಧ್ಯೆಯಲ್ಲಿಯೂ ಸತ್ಯದ ವಿಮೋಚನೆಯನ್ನು ಅವರು ಪತ್ತೆಹಚ್ಚುತ್ತಾರೆ.
‘ಆನಂದಿಸಿ, ಹರ್ಷಿಸಿ’
ಆದ್ದರಿಂದ, ಎಂದು ಜಗದ್ಗುರುಗಳು ನೆನಪಿಸಿದರು, “ಯೇಸು ಘೋಷಿಸುತ್ತಾರೆ: ಆನಂದಿಸಿ, ಹರ್ಷಿಸಿ!
ಶಕ್ತಿಶಾಲಿಗಳೇ ಸದಾ ಭೂಮಿಯನ್ನು ಆಳುತ್ತಾರೆ ಎಂದು ನಂಬುವವರಿಗೆ ಧನ್ಯವಾಕ್ಯಗಳು ವಿರೋಧಾಭ್ಯಾಸದಂತೆ ಕಾಣಬಹುದು ಎಂಬುದನ್ನು ಜಗದ್ಗುರುಗಳು ಒಪ್ಪಿಕೊಂಡರು.
ಸಂತೋಷವು ಶ್ರೀಮಂತರಿಗೆ ಮಾತ್ರ ಸೇರಿದೆ ಎಂದು ಯೋಚಿಸುವವರು ಯೇಸು ತಪ್ಪು ದಾರಿಯಲ್ಲಿ ಇದ್ದಾರೆ ಎಂದು ಭಾವಿಸಬಹುದು. ಆದರೆ ನಿಜವಾದ ತಪ್ಪು ಕ್ರಿಸ್ತನ ಮೇಲಿನ ನಂಬಿಕೆಯ ಕೊರತೆಯಲ್ಲಿದೆ ಎಂದು ಅವರು ಹೇಳಿದರು.
ಆದರೆ ಕ್ರಿಸ್ತನು ಎಲ್ಲರೊಂದಿಗೆ ತನ್ನ ಜೀವನವನ್ನು ಹಂಚಿಕೊಳ್ಳುವ ಬಡವನು, ದುಃಖದಲ್ಲಿ ಸ್ಥಿರನಾಗಿರುವ ವಿನಯಿ, ಶಿಲುಬೆಯಲ್ಲಿ ಸಾವಿಗೆ ಗುರಿಯಾದ ಶಾಂತಿಸಾಧಕ ಎಂದು ಜಗದ್ಗುರುಗಳು ಆಶ್ಚರ್ಯ ವ್ಯಕ್ತಪಡಿಸಿದರು.
ಈ ರೀತಿ ಯೇಸು ಇತಿಹಾಸದ ಅರ್ಥವನ್ನು ಪ್ರಕಾಶಮಾನಗೊಳಿಸುತ್ತಾನೆ. ಇತಿಹಾಸವು ಇನ್ನು ಜಯಶಾಲಿಗಳಿಂದ ಬರೆಯಲ್ಪಡುವುದಿಲ್ಲ ಬದಲಾಗಿ ದಬ್ಬಾಳಿಕೆಗೆ ಒಳಗಾದವರನ್ನು ರಕ್ಷಿಸುವ ಮೂಲಕ ಅದನ್ನು ನೆರವೇರಿಸುವ ದೇವರಿಂದ ಬರೆಯಲ್ಪಡುತ್ತದೆ, ಎಂದು ಅವರು ಒತ್ತಿಹೇಳಿದರು.
ವಿಶೇಷವಾಗಿ ಜಗತ್ತು ನಿರಾಶ್ರಿತರಂತೆ ತಳ್ಳಿಹಾಕುವವರಿಗೆ ದೇವರು ಆಶೆಯನ್ನು ನೀಡುತ್ತಾನೆ.
ಸಂತೋಷದ ಮಾನದಂಡ
ಇದಲ್ಲದೆ, ಜಗದ್ಗುರುಗಳು ಹೇಳಿದರು:
ಧನ್ಯವಾಕ್ಯಗಳು ನಮಗೆ ಸಂತೋಷದ ಮಾನದಂಡವಾಗುತ್ತವೆ.
ಅವು ನಮ್ಮನ್ನು ಈ ಪ್ರಶ್ನೆ ಕೇಳಿಕೊಳ್ಳುವಂತೆ ಮಾಡುತ್ತವೆ ಸಂತೋಷವನ್ನು ಖರೀದಿಸಬಹುದಾದ ಸಾಧನೆಯೆಂದು ನಾವು ನೋಡುವುದೇ, ಅಥವಾ ಹಂಚಿಕೊಳ್ಳಬೇಕಾದ ವರವೆಂದು ನೋಡುವುದೇ?
ಅದನ್ನು ನಾಶವಾಗುವ ವಸ್ತುಗಳಲ್ಲಿ ಹುಡುಕುತ್ತೇವೆಯೇ, ಅಥವಾ ನಮ್ಮ ಜೊತೆಗೆ ನಡೆಯುವ ಸಂಬಂಧಗಳಲ್ಲಿ ನೆಲೆಗೊಳಿಸುತ್ತೇವೆಯೇ?
ಕ್ರಿಸ್ತನ, ಪರೀಕ್ಷೆಗಳ ಕಹಿತನವು ವಿಮೋಚಿತನ ಆನಂದವಾಗಿ ಪರಿವರ್ತಿತವಾಗುತ್ತದೆ ಎಂದು ಅವರು ಹೇಳಿದರು.
ಯೇಸು ದೂರದ ಸಾಂತ್ವನದ ಬಗ್ಗೆ ಮಾತನಾಡುವುದಿಲ್ಲ ಬದಲಾಗಿ ಸದಾ ನಮ್ಮನ್ನು ಧರಿಸುವ, ವಿಶೇಷವಾಗಿ ಸಂಕಟದ ಕ್ಷಣದಲ್ಲಿ ನಮ್ಮನ್ನು ಬೆಂಬಲಿಸುವ ನಿರಂತರ ಕೃಪೆಯ ಬಗ್ಗೆ ಮಾತನಾಡುತ್ತಾನೆ.
ಧನ್ಯವಾಕ್ಯಗಳು ವಿನಯಿಗಳನ್ನು ಎತ್ತಿ ಹಿಡಿಯುತ್ತವೆ ಮತ್ತು ಗರ್ವಿಗಳನ್ನು ಅವರ ಅಂತರಂಗದ ಚಿಂತನೆಗಳಲ್ಲಿ ಚದುರಿಸುತ್ತವೆ ಎಂದು ಜಗದ್ಗುರುಗಳು ಹೇಳಿದರು.
ಅಂತಿಮವಾಗಿ, ಜಗದ್ಗುರು XIVನೇ ಲಿಯೋರವರು, ಎಲ್ಲಾ ಪೀಳಿಗೆಗಳು ಧನ್ಯಳಾಗಿ ಕರೆಯುವ ಪ್ರಭುವಿನ ದಾಸಿಯಾದ ಪರಿಶುದ್ಧ ಮರಿಯಮ್ಮನವರಿಗೆ ನಮ್ಮನ್ನು ಸಮರ್ಪಿಸಿ, ಧನ್ಯವಾಕ್ಯಗಳಲ್ಲಿ ಬದುಕಲು ಅವರು ನಮಗೆ ಸಹಾಯ ಮಾಡಲಿ ಎಂದು ಪ್ರಾರ್ಥಿಸಿದರು.
