ಹುಡುಕಿ

ರೂಬಾಯಾ ಕೊಲ್ಟಾನ್ ಗಣಿಯಲ್ಲಿ ಕೈಗಾರಿಕೇತರ ಗಣಿಗಾರರು ಗಣಿಗಾರಿಕೆ ನಡೆಸುತ್ತಿದ್ದಾರೆ. ರೂಬಾಯಾ ಕೊಲ್ಟಾನ್ ಗಣಿಯಲ್ಲಿ ಕೈಗಾರಿಕೇತರ ಗಣಿಗಾರರು ಗಣಿಗಾರಿಕೆ ನಡೆಸುತ್ತಿದ್ದಾರೆ. 

ಪೂರ್ವ ಡಿಆರ್ ಕಾಂಗೋ ಗಣಿಗಾರಿಕಾ ಅವಘಡದಲ್ಲಿ ಸಾವಿಗೀಡಾದ 200ಕ್ಕೂ ಹೆಚ್ಚು ಜನರಿಗಾಗಿ ಜಗದ್ಗುರುಗಳ ಪ್ರಾರ್ಥನೆ

ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್ ಕಾಂಗೋ) ದೇಶದ ಪೂರ್ವ ಭಾಗದಲ್ಲಿ ಕೋಲ್ಟಾನ್ ಗಣಿಯೊಂದು ಕುಸಿದು ಈ ವಾರ ನೂರಾರು ಜನರು ಸಾವಿಗೀಡಾದ ಹಿನ್ನೆಲೆಯಲ್ಲಿ, ಜಗದ್ಗುರು XIVನೇ ಲಿಯೋರವರು ಅವರ ಆತ್ಮಶಾಂತಿಗಾಗಿ ಪ್ರಾರ್ಥಿಸಿದ್ದಾರೆ. ಜೊತೆಗೆ, ಮೊಜಾಂಬಿಕ್ ಮತ್ತು ಪೋರ್ಚುಗಲ್‌ನಲ್ಲಿ ಸಂಭವಿಸಿದ ಬಿರುಗಾಳಿಗೆ ಬಲಿಯಾಗಿರುವವರನ್ನೂ ಅವರು ಸ್ಮರಿಸಿದ್ದಾರೆ.

ವ್ಯಾಟಿಕನ್ ವರದಿ

ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ ದೇಶದ ಪೂರ್ವ ಭಾಗದಲ್ಲಿರುವ ಉತ್ತರ ಕಿವು ಪ್ರಾಂತ್ಯದಲ್ಲಿ ಬುಧವಾರ ಭೀಕರ ಭೂಕುಸಿತ ಸಂಭವಿಸಿ, ಪ್ರಮುಖ ಕೋಲ್ಟಾನ್ ಗಣಿಗಾರಿಕಾ ಪ್ರದೇಶದಲ್ಲಿ ಹಲವು ಗಣಿಗಳು ಕುಸಿದು ಬಿದ್ದವು. ರೂಬಾಯಾ ಗಣಿಗಳಲ್ಲಿ ನಡೆದ ಈ ದುರ್ಘಟನೆಯಲ್ಲಿ ಕನಿಷ್ಠ 200 ಜನರು ಮೃತಪಟ್ಟಿದ್ದಾರೆ ಎಂದು, ಆ ಪ್ರದೇಶವನ್ನು ನಿಯಂತ್ರಿಸುವ ಎಂ23 ಬಂಡುಕೋರರು ನೇಮಿಸಿದ ಉತ್ತರ ಕಿವು ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರ

ಭಾನುವಾರದ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಮಾತನಾಡಿದ ಜಗದ್ಗುರು XIVನೇ ಲಿಯೋರವರು, ಈ ದುರಂತದ ಬಲಿಯಾದವರಿಗೂ ಅವರ ಕುಟುಂಬಗಳಿಗೂ ತಮ್ಮ ಆತ್ಮೀಯ ಸಮೀಪತೆಯನ್ನು ವ್ಯಕ್ತಪಡಿಸಿದರು. ಉತ್ತರ ಕಿವು ಪ್ರದೇಶದಲ್ಲಿನ ಗಣಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟ ಅನೇಕ ಬಲಿದಾನಿಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ಬಹಳ ಕಷ್ಟ ಅನುಭವಿಸುತ್ತಿರುವ ಆ ಜನರನ್ನು ಪ್ರಭು ಶಕ್ತಿನೀಡಲಿ ಎಂದು ಅವರು ಹೇಳಿದರು.

ರೂಬಾಯಾ ಪ್ರದೇಶವು ಗೋಮಾ ನಗರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿದ್ದು, ಅಲ್ಲಿ ನಡೆಯುತ್ತಿದ್ದ ಕೈಗಾಡಿ  ಗಣಿಗಾರಿಕೆಯನ್ನು ಎಂ23 ಬಂಡುಕೋರರು ನೇಮಿಸಿದ ಅಧಿಕಾರಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಈ ನಡುವೆ, ಡಿಆರ್ ಕಾಂಗೋ ಸರ್ಕಾರವು ಬಲಿದಾನಿಗಳೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದರೂ, ಎಂ23 ಬಂಡುಕೋರರು ಅಕ್ರಮ ಹಾಗೂ ಅಸುರಕ್ಷಿತ ರೀತಿಯಲ್ಲಿ ದೇಶದ ನೈಸರ್ಗಿಕ ಸಂಪನ್ಮೂಲಗಳನ್ನು ದುರುಪಯೋಗಪಡಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಡಿಆರ್ ಕಾಂಗೋ ದೇಶವು ಜಗತ್ತಿನ ಪ್ರಮುಖ ಕೋಲ್ಟಾನ್ ಪೂರೈಕೆದಾರರಲ್ಲಿ ಒಂದಾಗಿದ್ದು, 2023ರಲ್ಲಿ ಜಗತ್ತಿನ ಒಟ್ಟು ಉತ್ಪಾದನೆಯ ಸುಮಾರು 40 ಶೇಕಡಾವನ್ನು ಪೂರೈಸಿದೆ. ಈ ಲೋಹಧಾತು ಸ್ಮಾರ್ಟ್‌ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ವಿಮಾನ ಎಂಜಿನ್‌ಗಳ ನಿರ್ಮಾಣಕ್ಕೆ ಅಗತ್ಯವಾದ ಖನಿಜಗಳನ್ನು ಹೊಂದಿದೆ.

ಆ ಪ್ರದೇಶದ ಮಾಜಿ ಗಣಿಕರು ಅಸೋಸಿಯೇಟೆಡ್ ಪ್ರೆಸ್‌ಗೆ ನೀಡಿದ ಮಾಹಿತಿಯಂತೆ, ಗಣಿಗಳು ದೊಡ್ಡ ಗುಂಡಿಗಳಾಗಿದ್ದು, ಅವುಗಳಿಂದ ಕೈಯಿಂದಲೇ ಸುರಂಗಗಳನ್ನು ತೋಡಿ ನಿರ್ವಹಣೆ ಇಲ್ಲದೆ ಬಿಟ್ಟುಬಿಡಲಾಗುತ್ತದೆ. ಅನೇಕ ಸುರಂಗಗಳು ಸಮಾಂತರವಾಗಿ ಸಾಗುವುದರಿಂದ, ಒಂದರ ಕುಸಿತ ಮತ್ತಿತರ ಗಣಿಗಳ ಕುಸಿತಕ್ಕೂ ಕಾರಣವಾಗುತ್ತದೆ.

ಇದೇ ತ್ರಿಕಾಲ ಪ್ರಾರ್ಥನೆಯ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು ಮೊಜಾಂಬಿಕ್, ದಕ್ಷಿಣ ಇಟಲಿ ಮತ್ತು ಪೋರ್ಚುಗಲ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಬಿರುಗಾಳಿ ಮತ್ತು ಪ್ರವಾಹಗಳ ಬಲಿದಾನಿಗಳಿಗಾಗಿ ಕೂಡ ಪ್ರಾರ್ಥಿಸಿದರು. ಮೊಜಾಂಬಿಕ್‌ನಲ್ಲಿ ತೀವ್ರ ಮಳೆ ಮತ್ತು ಪ್ರವಾಹಗಳಿಂದ ಈ ವಾರ ಕನಿಷ್ಠ 150 ಜನರು ಮೃತಪಟ್ಟಿದ್ದು, ಸುಮಾರು 10 ಲಕ್ಷ ಜನರು ಪರಿಣಾಮಕ್ಕೆ ಒಳಗಾಗಿದ್ದಾರೆ. ಮಧ್ಯ ಪೋರ್ಚುಗಲ್‌ನಲ್ಲಿ ಸ್ಟಾರ್ಮ್ ಕ್ರಿಸ್ಟಿನ್ ಕಾರಣವಾಗಿ ಗಂಟೆಗೆ 202 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಭಾರೀ ನಾಶ ಉಂಟಾಗಿ, ಕನಿಷ್ಠ 6 ಜನರು ಸಾವಿಗೀಡಾಗಿದ್ದಾರೆ ಎಂದು ಹೇಳಿದರು.

01 ಫೆಬ್ರವರಿ 2026, 15:24