ಜಗದ್ಗುರು XIVನೇ ಲಿಯೋರವರು ರೋಮಿನ ಕೊಲೊಸ್ಸಿಯಮ್ನಲ್ಲಿ ನಡೆದ ಶಿಲುಬೆ ಹಾದಿಯ ಸಂದರ್ಭದಲ್ಲಿ ಶಿಲುಬೆಯನ್ನು ಹೊತ್ತರು.
ವ್ಯಾಟಿಕನ್ ವರದಿ
ಜಗದ್ಗುರು XIVನೇ ಲಿಯೋರವರು ರೋಮಿನ ಕೊಲೊಸ್ಸಿಯಮ್ನಲ್ಲಿ ನಡೆದ ಪವಿತ್ರ ಶುಕ್ರವಾರದ ಶಿಲುಬೆ ಹಾದಿಯ ವೇಳೆ ಸಂಪೂರ್ಣ ಮಾರ್ಗದವರೆಗೆ ಶಿಲುಬೆಯನ್ನು ಹೊತ್ತ ಎರಡನೇ ಜಗದ್ಗುರುಗಳಾಗಿದ್ದಾರೆ. ಸುಮಾರು 30,000 ವಿಶ್ವಾಸಿಗಳು ಮತ್ತು ಜಗತ್ತಿನಾದ್ಯಂತದ ಅನೇಕರು ಮಾಧ್ಯಮಗಳ ಮೂಲಕ ಈ ಆಚರಣೆಯಲ್ಲಿ ಭಾಗವಹಿಸಿದರು. ಪುರಾತನ ರೋಮಿನ ಕಟ್ಟಡವಾದ ಕೊಲೊಸ್ಸಿಯಮ್ನಲ್ಲಿ, ಅನೇಕ ಪ್ರಾರಂಭಿಕ ಕ್ರೈಸ್ತರ ಹುತಾತ್ಮತ್ವಕ್ಕೆ ಸಾಕ್ಷಿಯಾದ ಸ್ಥಳದಲ್ಲಿ, ಜಗದ್ಗುರುಗಳು ದೀಪದ ಬೆಳಕಿನಲ್ಲಿ ಶಿಲುಬೆಯ ಮಾರ್ಗವನ್ನು ಮುನ್ನಡೆಸಿದರು.
ಶಿಲುಬೆ ಹಾದಿಯ ಆಚರಣೆ ಪ್ರತಿ ವರ್ಷವೂ ಯೇಸುವಿನ ಪಾಡು, ಮರಣ ಮತ್ತು ಸಮಾಧಿಯನ್ನು ನೆನಪಿಸುವ 14 ಹಂತಗಳ ಆಧ್ಯಾತ್ಮಿಕ ಯಾತ್ರೆಯಾಗಿದೆ. ಈ ಸಂಪ್ರದಾಯದಲ್ಲಿ ಜಗದ್ಗುರು XIVನೇ ಲಿಯೋರವರು ಜಗದ್ಗುರು ಸಂತ IIನೇ ಜಾನ್ ಪಾಲ್ ರವರ ಹೆಜ್ಜೆಗುರುತುಗಳನ್ನು ಅನುಸರಿಸಿದರು, ಅವರು 1980ರಿಂದ 1994ರವರೆಗೆ ಸಂಪೂರ್ಣ ಶಿಲುಬೆ ಹಾದಿಯ ವೇಳೆ ಶಿಲುಬೆಯನ್ನು ಹೊತ್ತಿದ್ದರು.
ಈ ಆಚರಣೆಯ ವೇಳೆ ಸುವಾರ್ತೆಯ ಭಾಗಗಳು, ಸಂತ ಫ್ರಾನ್ಸಿಸ್ ರವರ ಬರಹಗಳು ಮತ್ತು ಫ್ರಾನ್ಸಿಸ್ಕನ್ ಗುರುಗಳು ವಂ.ಸ್ವಾಮಿ ಫ್ರಾನ್ಸೆಸ್ಕೋ ಪ್ಯಾಟನ್ ರವರ ಧ್ಯಾನಗಳು ಓದಲ್ಪಟ್ಟವು. ಅವರ ಧ್ಯಾನಗಳಲ್ಲಿ, ಕ್ರೈಸ್ತರು ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯನ್ನು ನೈಜ ಜೀವನದಲ್ಲಿ ಹೇಗೆ ಅನುಭವಿಸಬೇಕು ಎಂಬುದನ್ನು ಸಂತ ಫ್ರಾನ್ಸಿಸ್ ರವರ ಉದಾಹರಣೆಯ ಮೂಲಕ ವಿವರಿಸಲಾಗಿದೆ.
ವಂ.ಸ್ವಾಮಿ. ಪ್ಯಾಟನ್ ರವರು ಯೇಸುವಿನ ಜೆರೂಸಲೇಮಿನ ಸಣ್ಣ ಬೀದಿಗಳಿಂದ ಗೋಲ್ಗೊಥಾವರೆಗೆ ನಡೆದ ಮೂಲ ಮಾರ್ಗವನ್ನು ನಮ್ಮ ಮುಂದೆ ತಂದುಕೊಡುತ್ತಾರೆ. ಇಂದಿನ ಜಗತ್ತಿನಲ್ಲಿ ಗೊಂದಲ, ಶಬ್ದ ಮತ್ತು ವ್ಯತ್ಯಯಗಳ ನಡುವೆ ನಾವು ನಂಬಿಕೆಯನ್ನು ಅನುಸರಿಸುವುದೇ ಸವಾಲು ಎಂದು ಅವರು ಸೂಚಿಸುತ್ತಾರೆ. ಶಿಲುಬೆಯ ಮಾರ್ಗವು ಕೇವಲ ಭಕ್ತಿಯ ಜೀವನವಲ್ಲ, ಆದರೆ ನೈಜ ಜೀವನದಲ್ಲಿ ನಂಬಿಕೆ ಮತ್ತು ಪ್ರೀತಿಯನ್ನು ಅನುಸರಿಸುವ ಅಭ್ಯಾಸವಾಗಿದೆ ಎಂದು ಅವರು ಹೇಳಿದರು.
ಪ್ರತಿ ಹಂತದಲ್ಲಿಯೂ ಮಾನವನ ಅಧಿಕಾರದ ಅಹಂಕಾರ ಮತ್ತು ಅದನ್ನು ದುರುಪಯೋಗಪಡಿಸುವ ಪ್ರಲೋಭನೆಯನ್ನು ಅವರು ತೀವ್ರವಾಗಿ ಸೂಚಿಸುತ್ತಾರೆ. ಯೇಸು ಮೂರನೇ ಸಾರಿ ಬೀಳುವಾಗ, ಪ್ರೀತಿಯ ಶಕ್ತಿಯ ಮೂಲಕ ದೇವರ ಬಳಿಗೆ ಎತ್ತುವವನಾಗಿ ಯೇಸುವಿನ ಮೇಲೆ ನಂಬಿಕೆ ಇಡಬೇಕು ಎಂದು ಅವರು ನೆನಪಿಸುತ್ತಾರೆ. ಮನುಷ್ಯನ ಗೌರವವನ್ನು ಕಳೆಗಟ್ಟುವ ಘಟನೆಗಳನ್ನೂ ಅವರು ಪ್ರಸ್ತಾಪಿಸುತ್ತಾರೆ.
ಕೊನೆಯಲ್ಲಿ, ಯೇಸುವಿನ ಮರಣವು ಅಂತಿಮವಲ್ಲ, ಆದರೆ ದೇವರ ಬಳಿಗೆ ಮರಳುವ ಮಾರ್ಗವಾಗಿದೆ ಎಂದು ಅವರು ಹೇಳುತ್ತಾರೆ. ಜಗದ್ಗುರು XIVನೇ ಲಿಯೋರವರು ಕ್ರೈಸ್ತರು ತಮ್ಮ ಜೀವನವನ್ನು ಪ್ರೀತಿಯ ಸಂಗಮದಲ್ಲಿ ಇನ್ನಷ್ಟು ಆಳವಾಗಿ ಭಾಗವಹಿಸುವ ಯಾತ್ರೆಯಾಗಿ ನಡೆಸಬೇಕು ಎಂದು ಪ್ರಾರ್ಥಿಸಿದರು.
