ಹುಡುಕಿ

Il Papa, grazie per gli auguri di Pasqua, soprattutto per le preghiere

ರೆಜಿನಾ ಚೇಲಿ ಪ್ರಾರ್ಥನೆಯ ಸಂದರ್ಭದಲ್ಲಿ ಜಗದ್ಗುರುಗಳು ಕ್ರೈಸ್ತರನ್ನು ಹಿಂಸೆಯಿಂದ ಕುಂಠಿತಗೊಂಡಿರುವ ಭರವಸೆಗೆ ಧ್ವನಿಯಾಗಲು ಕರೆ ನೀಡಿದರು.

ಸುಳ್ಳು ಸುದ್ದಿಗಳು, ಸಂಘರ್ಷಗಳು ಮತ್ತು ಗೊಂದಲಗೊಂಡ ಮನಸ್ಸುಗಳಿಂದ ವಿಕೃತಗೊಂಡಿರುವ ಜಗತ್ತಿನಲ್ಲಿ ಸುವಾರ್ತೆಗೆ ಸಾಕ್ಷಿಯಾಗುವಂತೆ ಜಗದ್ಗುರು XIVನೇ ಲಿಯೋರವರು ಕ್ರೈಸ್ತರನ್ನು ಪ್ರೇರೇಪಿಸುತ್ತಾರೆ.

ವ್ಯಾಟಿಕನ್ ವರದಿ 

ಪಾಸ್ಕ ಸೋಮವಾರದಂದು ಸಂತ ಪೇತ್ರರ ಚೌಕದಲ್ಲಿ  ನಡೆದ ರೆಜಿನಾ ಚೇಲಿ ಪ್ರಾರ್ಥನೆಯ ಸಂದರ್ಭದಲ್ಲಿ ಜಗದ್ಗುರು XIVನೇ ಲಿಯೋರವರು, ತಪ್ಪು ಮಾಹಿತಿ, ಸಂಘರ್ಷಗಳು ಮತ್ತು ಸಾಮಾಜಿಕ ಹಿಂದುಳಿತದಿಂದ ಗುರುತಿಸಲ್ಪಟ್ಟಿರುವ ಸಂದರ್ಭದಲ್ಲೂ ಸುವಾರ್ತೆಗೆ ಸಾಕ್ಷಿಯಾಗಲು ಕ್ರೈಸ್ತರನ್ನು ಕರೆ ನೀಡಿದರು.

ಖಾಲಿ ಸಮಾಧಿಯ ಸುವಾರ್ತೆ ವರದಿಯನ್ನು ಆಲೋಚಿಸುತ್ತಾ, ಒಂದೇ ಘಟನೆಯಿಂದ ಎರಡು ವಿಭಿನ್ನ ವಿವರಗಳು ಹೊರಹೊಮ್ಮುತ್ತವೆ ಎಂದು ಜಗದ್ಗುರುಗಳು ಹೇಳಿದರು ಪುನರುತ್ಥಾನಿ ಯೇಸುವನ್ನು ಭೇಟಿಯಾದ ಮಹಿಳೆಯರ ಸಾಕ್ಷಿ—ಅವರು ಅವರ ಪುನರುತ್ಥಾನವನ್ನು ಘೋಷಿಸಿದರು—ಮತ್ತು ದೇಹವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ ರಕ್ಷಕರ ವರದಿ. ಈ ಒಂದೇ ಘಟನೆಯಿಂದ ಎರಡು ವಿರೋಧಿ ಅರ್ಥೈಸಿಕೆಗಳು ಉಂಟಾಗುತ್ತವೆ ಒಂದು ಜೀವವನ್ನು ಘೋಷಿಸುವುದು, ಮತ್ತೊಂದು ಅದನ್ನು ನಿರಾಕರಿಸುವುದು.

ಈ ವಿರುದ್ಧತೆ ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಮುಂದುವರಿಸಿದರು, ಏಕೆಂದರೆ ಸತ್ಯದ ಪ್ರಸಾರವನ್ನು ಬಹುಪಾಲು ತಡೆಯಲಾಗುತ್ತದೆ. ಇಂದಿನ ಕಾಲದಲ್ಲಿ ‘ನಕಲಿ ಸುದ್ದಿ’ ಎಂದು ಕರೆಯಲ್ಪಡುವ ಸುಳ್ಳುಗಳು, ಸಂಶಯಾಸ್ಪದ ಸೂಚನೆಗಳು ಮತ್ತು ಆಧಾರವಿಲ್ಲದ ಆರೋಪಗಳಿಂದ ಸತ್ಯದ ಘೋಷಣೆ ಮಸುಕಾಗುತ್ತದೆ, ಎಂದು ಅವರು ಹೇಳಿದರು.

ಇತಿಹಾಸವನ್ನು ವಿಕೃತಗೊಳಿಸುವ ದುಷ್ಟತೆಯಿಂದ ಮತ್ತು ಮನಸ್ಸುಗಳನ್ನು ಗೊಂದಲಗೊಳಿಸುವ ಶಕ್ತಿಯಿಂದ ಹಿಂಸಿಸಲ್ಪಟ್ಟವರಿಗೆ ಸುವಾರ್ತೆಯ ಸತ್ಯ ತಲುಪಲು ಅವಕಾಶ ಮಾಡಿಕೊಡುವ ಮಹತ್ವವನ್ನು ಅವರು ಒತ್ತಿಹೇಳಿದರು, ಹಾಗಾಗಿ ಪಾಸ್ಕ ರಹಸ್ಯವು ಮಾತು ಮತ್ತು ಕೃತ್ಯಗಳಲ್ಲಿ ಭರವಸೆಗೆ ಹೊಸ ಧ್ವನಿಯನ್ನು ನೀಡಲಿ ಎಂದರು.

ಸುವಾರ್ತೆಯನ್ನು ಘೋಷಿಸಲು ಹೆದರಬೇಡಿ

ಇಂದಿನ ಗೊಂದಲದ ನಡುವೆಯೂ ಸತ್ಯವು ಅಡಗುವುದಿಲ್ಲ ಎಂದು ಜಗದ್ಗುರುಗಳು ಸೂಚಿಸಿದರು. ಯೇಸುವಿನ “ಭಯಪಡಬೇಡಿ; ಹೋಗಿ ಹೇಳಿರಿ” ಎಂಬ ಮಾತುಗಳನ್ನು ಸ್ಮರಿಸಿಕೊಂಡು, ಈ ನಿರ್ದೇಶನವು ಕ್ರೈಸ್ತ ಸಾಕ್ಷಿಗಾಗಿ ಅತ್ಯಂತ ಮಹತ್ವದ ಮಾರ್ಗದರ್ಶಕವಾಗಿಯೇ ಉಳಿದಿದೆ ಎಂದು ಹೇಳಿದರು.

ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ ಅನೇಕ ವ್ಯಕ್ತಿಗಳು ಮತ್ತು ಸಮುದಾಯಗಳು ಹಿಂಸೆ ಮತ್ತು ಹಿಂದುಳಿತದ ಪರಿಣಾಮಗಳನ್ನು ಅನುಭವಿಸುತ್ತಿದ್ದಾರೆ ಎಂದು ಅವರು ಗಮನಸೆಳೆದರು ವಿಶೇಷವಾಗಿ ಯುದ್ಧದಿಂದ ಬಳಲುತ್ತಿರುವ ಜನರು, ತಮ್ಮ ನಂಬಿಕೆಗೆ ಹಿಂಸೆಗೆ ಒಳಗಾಗಿರುವ ಕ್ರೈಸ್ತರು, ಮತ್ತು ಶಿಕ್ಷಣದಿಂದ ವಂಚಿತರಾದ ಮಕ್ಕಳು.

“ಕ್ರಿಸ್ತನ ಪಾಸ್ಕ ರಹಸ್ಯವನ್ನು ಮಾತು ಮತ್ತು ಕೃತ್ಯಗಳಲ್ಲಿ ಘೋಷಿಸುವುದು ಎಂದರೆ ಭರವಸೆಗೆ ಹೊಸ ಧ್ವನಿಯನ್ನು ನೀಡುವುದಾಗಿದೆ, ಎಂದು ಜಗದ್ಗುರುಗಳು ಹೇಳಿದರು ಅಂತಹ ಭರವಸೆಯನ್ನು ಹಲವು ವೇಳೆ ಹಿಂಸಾತ್ಮಕರ ಕೈಗಳು ಮೌನಗೊಳಿಸುತ್ತವೆ.

ಸುವಾರ್ತೆ ಎಲ್ಲೆಲ್ಲಿ ಬದುಕಲ್ಪಡುತ್ತದೆ ಮತ್ತು ಘೋಷಿಸಲಾಗುತ್ತದೆ ಅಲ್ಲಿ ಅದು ಕತ್ತಲೆಗೆ ಬೆಳಕನ್ನು ತರುತ್ತದೆ ಮತ್ತು ಗೊಂದಲದ ನಡುವೆ ಅರ್ಥವನ್ನು ಪುನಃ ಸ್ಥಾಪಿಸುತ್ತದೆ ಎಂದು ಅವರು ಸೇರಿಸಿದರು.

ಜಗದ್ಗುರು ಫ್ರಾನ್ಸಿಸ್ ರವರ ಸ್ಮರಣೆ

ತಮ್ಮ ಭಾಷಣದ ಕೊನೆಯಲ್ಲಿ, ಜಗದ್ಗುರುಗಳು ನಂಬಿಗಸ್ತರನ್ನು ಕೃತಜ್ಞತೆಯಿಂದ ಜಗದ್ಗುರು ಫ್ರಾನ್ಸಿಸ್ ರವರನ್ನು ಸ್ಮರಿಸಲು ಆಹ್ವಾನಿಸಿದರು, ಅವರು ಹಿಂದಿನ ವರ್ಷದ ಪಾಸ್ಕ ಸೋಮವಾರದಂದು ಪ್ರಭುವಿನ ಬಳಿಗೆ ಹಿಂತಿರುಗಿದರು. ತಮ್ಮ ಪೂರ್ವಾಧಿಕಾರಿಯ ಆಳವಾದ ನಂಬಿಕೆ ಮತ್ತು ಪ್ರೀತಿಯ ಸಾಕ್ಷಿಯನ್ನು ಸ್ಮರಿಸುತ್ತಾ, ಅವರು ಧರ್ಮ ಸಭೆಯನ್ನು  ದೇವಮಾತೆಯ ಮಧ್ಯಸ್ಥಿಕೆಗೆ ಒಪ್ಪಿಸಿದರು.

“ನಾವು ಪ್ರಾರ್ಥಿಸೋಣ,” ಎಂದು ಅವರು ಹೇಳಿದರು, ನಾವು ಸತ್ಯದ ಇನ್ನಷ್ಟು ಪ್ರಕಾಶಮಾನ ಘೋಷಕರಾಗಲಿ ಎಂದು ಬಯಸಿದರು.

ಅಭಿವೃದ್ಧಿ ಮತ್ತು ಶಾಂತಿಗಾಗಿ ಅಂತರರಾಷ್ಟ್ರೀಯ ಕ್ರೀಡಾ ದಿನ

ರೆಜಿನಾ ಚೇಲಿ ಪ್ರಾರ್ಥನೆಯ ನಂತರ, ಜಗದ್ಗುರುಗಳು ಅಭಿವೃದ್ಧಿ ಮತ್ತು ಶಾಂತಿಗಾಗಿ ಅಂತರರಾಷ್ಟ್ರೀಯ ಕ್ರೀಡಾ ದಿನ ಅಂಗವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಎಲ್ಲರನ್ನೂ ವಿಶೇಷವಾಗಿ ಸ್ಮರಿಸಿದರು. ಈ ದಿನವನ್ನು ವಿಶ್ವ ಸಂಸ್ಥೆಯು ಸ್ಥಾಪಿಸಿದ್ದು, ಕ್ರೀಡೆಯು ಸಂಪರ್ಕ, ಒಳಗೊಳ್ಳುವಿಕೆ ಮತ್ತು ಶಾಂತಿಯನ್ನು ಉತ್ತೇಜಿಸುವ ವಿಶಿಷ್ಟ ಸಾಮರ್ಥ್ಯವನ್ನು ಹೈಲೈಟ್ ಮಾಡುವ ಉದ್ದೇಶ ಹೊಂದಿದೆ.

ಹೀಗಾಗಿ, ಸಹೋದರತ್ವದ ಸಾಮಾನ್ಯ ಭಾಷೆಯಾದ ಕ್ರೀಡೆ, ಒಳಗೊಳ್ಳುವಿಕೆ ಮತ್ತು ಶಾಂತಿಯ ಸ್ಥಳವಾಗಿರಲಿ ಎಂದು ಜಗದ್ಗುರುಗಳು ತಮ್ಮ ಮನವಿಯನ್ನು ಪುನರುಚ್ಚರಿಸಿದರು.

06 ಏಪ್ರಿಲ್ 2026, 14:36