ಹುಡುಕಿ

ಜಗದ್ಗುರು XIVನೇ ಲಿಯೋರವರು ಇಸ್ರೇಲ್ ರಾಜ್ಯದ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಪ್ರೇಕ್ಷಕರಲ್ಲಿ ಸ್ವೀಕರಿಸುತ್ತಿರುವ ಚಿತ್ರ ಪಟ ಜಗದ್ಗುರು XIVನೇ ಲಿಯೋರವರು ಇಸ್ರೇಲ್ ರಾಜ್ಯದ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರನ್ನು ಪ್ರೇಕ್ಷಕರಲ್ಲಿ ಸ್ವೀಕರಿಸುತ್ತಿರುವ ಚಿತ್ರ ಪಟ  (@Vatican Media)

ಜಗದ್ಗುರುಗಳು ಮತ್ತು ಇಸ್ರೇಲ್ ಅಧ್ಯಕ್ಷರು ಎಲ್ಲಾ ಸಂವಾದದ ಮಾರ್ಗಗಳನ್ನು ಮರು ತೆರೆಯುವ ಅಗತ್ಯವನ್ನು ಒತ್ತಿಹೇಳಿದರು.

ಜಗದ್ಗುರು XIVನೇ ಲಿಯೋರವರು ಮತ್ತು ಇಸ್ರೇಲ್ ರಾಜ್ಯದ ಅಧ್ಯಕ್ಷರಾದ ಐಸಾಕ್ ಹೆರ್ಝೋಗ್ ರವರು ಪಾಸ್ಖ ಹಬ್ಬದ ಸಂದರ್ಭದಲ್ಲಿ ಶುಕ್ರವಾರ ಬೆಳಿಗ್ಗೆ ದೂರವಾಣಿ ಮೂಲಕ ಮಾತನಾಡಿದರು. ಈ ಸಂಭಾಷಣೆಯಲ್ಲಿ ನಡೆಯುತ್ತಿರುವ ಗಂಭೀರ ಸಂಘರ್ಷವನ್ನು ಅಂತ್ಯಗೊಳಿಸುವ ಅಗತ್ಯದ ಮೇಲೆ ಗಮನ ಕೇಂದ್ರೀಕರಿಸಲಾಯಿತು.

ವ್ಯಾಟಿಕನ್ ವರದಿ

ಪಾಸ್ಖ ಹಬ್ಬದ ಸಂದರ್ಭದಲ್ಲಿ, ಏಪ್ರಿಲ್ 3ರಂದು ಶುಕ್ರವಾರ ಬೆಳಿಗ್ಗೆ, ಜಗದ್ಗುರು XIVನೇ ಲಿಯೋರವರು ಮತ್ತು ಇಸ್ರೇಲ್ ರಾಜ್ಯದ ಅಧ್ಯಕ್ಷರಾದ ಐಸಾಕ್ ಹೆರ್ಝೋಗ್ ರವರ ನಡುವೆ ದೂರವಾಣಿ ಸಂಭಾಷಣೆ ನಡೆಯಿತು.

ಈ ಕರೆ ಬಗ್ಗೆ ದೃಢೀಕರಿಸಿದ ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಸಂಭಾಷಣೆಯ ವೇಳೆ ನಡೆಯುತ್ತಿರುವ ಗಂಭೀರ ಸಂಘರ್ಷವನ್ನು ಅಂತ್ಯಗೊಳಿಸಲು, ಎಲ್ಲಾ ಸಾಧ್ಯವಾದ ರಾಜತಾಂತ್ರಿಕ ಸಂವಾದ ಮಾರ್ಗಗಳನ್ನು ಮರು ತೆರೆಯುವ ಅಗತ್ಯವನ್ನು ಪುನರುಚ್ಚರಿಸಲಾಯಿತು ಇದರಿಂದ ಮಧ್ಯಪೂರ್ವದಾದ್ಯಂತ ನ್ಯಾಯಸಮ್ಮತ ಮತ್ತು ಶಾಶ್ವತ ಶಾಂತಿಯನ್ನು ಸಾಧಿಸುವ ಉದ್ದೇಶ ಹೊಂದಲಾಗಿದೆ.

ಚರ್ಚೆ ಮುಂದುವರಿದಂತೆ,”  ಜಗದ್ಗುರುಗಳ ಅಧಿಕಾರ ಸ್ಥಳದ ಪತ್ರಿಕಾ ಕಚೇರಿಯ ಪ್ರಕಟಣೆ ಅಂತಿಮವಾಗಿ ತಿಳಿಸಿತು, ಸಾಮಾನ್ಯ ನಾಗರಿಕರ ರಕ್ಷಣೆಯ ಮಹತ್ವ ಹಾಗೂ ಅಂತರರಾಷ್ಟ್ರೀಯ ಮತ್ತು ಮಾನವೀಯ ಕಾನೂನುಗಳಿಗೆ ಗೌರವ ನೀಡುವ ಅಗತ್ಯದ ಮೇಲೆ ಗಮನ ಕೇಂದ್ರೀಕರಿಸಲಾಯಿತು.

03 ಏಪ್ರಿಲ್ 2026, 15:03