ಗಾಜಾದಲ್ಲಿನ ಭಯಾನಕತೆಯನ್ನು ನಿರ್ಲಕ್ಷಿಸುವಂತಿಲ್ಲ
ಮಾಸ್ಸಿಮಿಲಿಯಾನೊ ಮೆನಿಚೆಟ್ಟಿ
ನಾವು ಇನ್ನೂ ಎಷ್ಟು ಸಮಯ ಕಾಯಬೇಕು? ಯುದ್ಧದ ಅನಾಗರಿಕತೆಯನ್ನು ನಿಲ್ಲಿಸುವ ಮೊದಲು ನಾವು ಇನ್ನೇನು ನೋಡಬೇಕು. ಇತ್ತೀಚೆಗೆ ವಿಶ್ವಗುರು ಹದಿನಾಲ್ಕನೇ ಲಿಯೋರವರು ಮರುಪ್ರಾರಂಭಿಸಿದ ಮನವಿ? ಗಾಜಾದಿಂದ ಪ್ರತಿದಿನ ನೋವಿನ ಒಂದು ಕೂಗು ಕೇಳಿಬರುತ್ತಿದೆ. ಪ್ರತಿಯೊಂದು ಯುದ್ಧವು ಕೊನೆಗೊಳ್ಳಲೇಬೇಕಾದ ದುರಂತವಾಗಿದೆ, ಅದು ಉಕ್ರೇನ್, ಸುಡಾನ್, ಮ್ಯಾನ್ಮಾರ್ ಅಥವಾ ಯೆಮೆನ್ನಲ್ಲಿರಲಿ. ಒಬ್ಬ ವ್ಯಕ್ತಿಯ ಸಾವು ಕೂಡ ಇಡೀ ಮಾನವೀಯತೆಯನ್ನು ಕುಗ್ಗಿಸುತ್ತದೆ. ಆದರೂ ಗಾಜಾದಲ್ಲಿ, ಸಾವು ಬಾಂಬ್ಗಳು ಅಥವಾ ಗುಂಡುಗಳಿಂದ ಮಾತ್ರವಲ್ಲ, ಹಸಿವಿನಿಂದಲೂ ಬಳಲುತ್ತಿದೆ.
ಮಾಹಿತಿಯುಕ್ತ ಮತ್ತು ಸಂಪರ್ಕ ಹೊಂದಿದ ಜಗತ್ತಿನಲ್ಲಿ, ಪ್ರತಿಯೊಂದು ಘಟನೆಯನ್ನು ಚಿತ್ರಗಳು ಮತ್ತು ಧ್ವನಿಯಲ್ಲಿ ದಾಖಲಿಸಿ ಪ್ರಸಾರ ಮಾಡುವಲ್ಲಿ, ಜನರು ಅಭಾವದಿಂದ ಸಾಯುತ್ತಿದ್ದಾರೆ. ತಂತ್ರಜ್ಞಾನವು ದುಃಖವನ್ನು ದಾಖಲಿಸುತ್ತದೆ ಆದರೆ ಅವರ ಕಷ್ಟಗಳನ್ನು, ನೋವುಗಳನ್ನು ಗುಣಪಡಿಸುವುದಿಲ್ಲ. ಅಂತಹ ಅಮಾನವೀಯತೆಯನ್ನು ಎದುರಿಸುವಾಗ, ಉದಾಸೀನತೆಯು ಒಂದು ಆಯ್ಕೆಯಲ್ಲ. ಅಂತಹ ದುಃಖವನ್ನು ನೋಡಿದ ನಂತರ ನಾವು ಮರಗಟ್ಟಲು ಅಥವಾ ಹಿಂದೆ ಸರಿಯಲು ಸಾಧ್ಯವಿಲ್ಲ.
ನಾವೆಲ್ಲರೂ ಶಾಂತಿ, ಸ್ವಾಗತ, ಸಂವಾದ, ಭ್ರಾತೃತ್ವ ಮತ್ತು ಭರವಸೆಯ ನಿರ್ಮಾಣಕಾರರಾಗಲು ಕರೆಯಲ್ಪಟ್ಟಿದ್ದೇವೆ. ಪ್ರತಿಯೊಬ್ಬ ವ್ಯಕ್ತಿಯು ಜೀವನವನ್ನು ರಕ್ಷಿಸುವ, ಘನತೆಯನ್ನು ಎತ್ತಿಹಿಡಿಯುವ ಮತ್ತು ಸಾಮಾನ್ಯ ಒಳಿತನ್ನು ಉತ್ತೇಜಿಸುವ ಧ್ವನಿಯನ್ನು ಹೊಂದಿರುತ್ತಾನೆ. ನೆರವು, ಮಧ್ಯಸ್ಥಿಕೆ ಮತ್ತು ಬೆಂಬಲಕ್ಕಾಗಿ ಎದ್ದ ಅನೇಕ ಧ್ವನಿಗಳು ಕೇಳದೆ ಮತ್ತು ಗಮನವಿಲ್ಲದೆ ಉಳಿಯಬಾರದು. ರಾಜಕೀಯ ನಾಯಕರು ಮತ್ತು ಸರ್ಕಾರಗಳು ಜನರ ಧ್ವನಿಗೆ ಸ್ಪಂದಿಸದೆ ಮೌನವಾಗಿರಬಾರದು.
ಶಾಂತಿ ಮತ್ತು ದೃಢವಾದ ನೆರವಿನ ಮಾರ್ಗಗಳನ್ನು ಆರಿಸಿಕೊಂಡು ನಿರ್ಮಿಸುವ ಮೂಲಕ, ರಾಜತಾಂತ್ರಿಕತೆಯ ಕೆಲಸವು ಬಲಗೊಳ್ಳುತ್ತದೆ. ಈ ಕ್ರಿಯೆಗಳಲ್ಲಿಯೇ ನಿಜವಾದ ಮಾನವೀಯತೆಯು ಬೆಸೆದುಕೊಂಡಿದೆ. ಶಾಂತಿಯು ಕೇವಲ ಮಾತನಾಡುವ ಪದವಲ್ಲ, ಆದರೆ ಬದುಕುವ ವಾಸ್ತವವಾಗಿರುವ ಮಾನವೀಯತೆಯಾಗಿದೆ.