ಹುಡುಕಿ

ಸಾಮಾನ್ಯ ಕ್ರೈಸ್ತ ಪ್ರಜೆ ಕುಟುಂಬ ಮತ್ತು ಜೀವನಕ್ಕಾಗಿ ಇರುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಕೆವಿನ್ ಫ್ಯಾರೆಲ್ ಅವರು ಪೂರ್ಣಾಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಸಾಮಾನ್ಯ ಕ್ರೈಸ್ತ ಪ್ರಜೆ ಕುಟುಂಬ ಮತ್ತು ಜೀವನಕ್ಕಾಗಿ ಇರುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಕೆವಿನ್ ಫ್ಯಾರೆಲ್ ಅವರು ಪೂರ್ಣಾಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು 

ಕಾರ್ಡಿನಲ್ ಫ್ಯಾರೆಲ್: ಸ್ಥಳೀಯ ಧರ್ಮ ಸಭೆಯ ಸಾಮಾನ್ಯ ವಿಶ್ವಾಸಿಗಳಿಗೆ ಮೂಲಭೂತ ರೂಪಣೆಯಲ್ಲಿ ಸಹಾಯ ಮಾಡಬೇಕು

ಸಾಮಾನ್ಯ ಕ್ರೈಸ್ತ ಪ್ರಜೆ ಕುಟುಂಬ ಮತ್ತು ಜೀವನಕ್ಕಾಗಿ ಇರುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಕೆವಿನ್ ಜೆ. ಫ್ಯಾರೆಲ್ ರವರು, ಈ ವಾರ ರೋಮ್‌ನಲ್ಲಿ ನಡೆಯುತ್ತಿರುವ ಡಿಕಾಸ್ಟರಿಯ ಪೂರ್ಣಾಂಗ ಸಭೆಯನ್ನು ಉದ್ಘಾಟಿಸುವ ಸಂದರ್ಭದಲ್ಲಿ, ಸ್ಥಳೀಯ ಧರ್ಮಸಭೆಗಳು ಸಾಮಾನ್ಯ ವಿಶ್ವಾಸಿಗಳಿಗೆ ಮೂಲಭೂತ ರೂಪಣೆಯನ್ನು ಒದಗಿಸುವಲ್ಲಿ ಸಹಾಯ ಮಾಡಬೇಕೆಂದು ಕರೆ ನೀಡಿದರು. ಜೊತೆಗೆ, ವಿಶ್ವ ಸಭೆಗಳು ಯೇಸು ಕ್ರಿಸ್ತನೊಂದಿಗೆ ನಿಜವಾದ ಭೇಟಿಯ ಅನುಭವಗಳು ಆಗಿರಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ವ್ಯಾಟಿಕನ್ ವರದಿ

ಬುಧವಾರ, ಸಾಮಾನ್ಯ ಕ್ರೈಸ್ತ ಪ್ರಜೆ, ಕುಟುಂಬ ಮತ್ತು ಜೀವನಕ್ಕಾಗಿ ಇರುವ ಡಿಕಾಸ್ಟರಿಯ ಪ್ರಿಫೆಕ್ಟ್ ಕಾರ್ಡಿನಲ್ ಕೆವಿನ್ ಜೆ. ಫ್ಯಾರೆಲ್ ರವರು, ರೋಮ್‌ನ ಜೆಸೂಯಿಟ್ ಜನರಲ್ ಕುರಿಯಾದಲ್ಲಿ ಫೆಬ್ರವರಿ 4ರಿಂದ 6ರವರೆಗೆ ನಡೆಯುತ್ತಿರುವ ಡಿಕಾಸ್ಟರಿಯ ಮೂರನೇ ಪೂರ್ಣಾಂಗ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಸಾಮಾನ್ಯ ವಿಶ್ವಾಸಿಗಳಲ್ಲಿ ಕ್ರೈಸ್ತ ಜೀವನಕ್ಕೆ ಸಂಬಂಧಿಸಿದ ಮೂಲಭೂತ ರೂಪಣೆ ಅತ್ಯಂತ ಅಗತ್ಯವೆಂದು ಅವರು ಒತ್ತಿಹೇಳಿದರು. ಇದರಿಂದ, ಯೇಸು ಕ್ರಿಸ್ತನನ್ನು ಸಂಪೂರ್ಣವಾಗಿ ತಿಳಿಯದೇ ಇರುವ ಜನರ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿರುವ ಪರಿಸ್ಥಿತಿಗೆ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ವಿಶೇಷವಾಗಿ, ಅವರು ಹೃದಯದ ರೂಪಣೆಗೆ ಕರೆ ನೀಡಿದರು. ಇದು ಸಂಪೂರ್ಣ ಜೀವನವನ್ನು ಒಳಗೊಂಡಿರುವುದು. ಕ್ರೈಸ್ತ ಜೀವನದ ಮೂಲದಲ್ಲಿ ಯೇಸು ಕ್ರಿಸ್ತನ ವ್ಯಕ್ತಿಯೊಂದಿಗೆ ಉಂಟಾಗುವ ಒಂದು ಭೇಟಿ ಇದೆ. ಆ ಭೇಟಿ ಮೊದಲು ಹೃದಯವನ್ನು ಪರಿವರ್ತಿಸುತ್ತದೆ, ನಂತರ ನಮ್ಮ ಚಿಂತನಾ ಧೋರಣೆಯನ್ನು ಬದಲಿಸುತ್ತದೆ, ಮತ್ತು ಅಂತಿಮವಾಗಿ ದಿನನಿತ್ಯದ ವರ್ತನೆ ಹಾಗೂ ಸಂಪೂರ್ಣ ಜೀವನವನ್ನೇ ರೂಪಾಂತರಗೊಳಿಸುತ್ತದೆ.

ಸುವಾರ್ತಾಪ್ರಚಾರ ಮತ್ತು ಧರ್ಮೋಪದೇಶ

ಧರ್ಮ ಸಭೆ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರವೆಂದರೆ ರಚನೆಗಳನ್ನು ಬದಲಿಸುವುದಲ್ಲ, ಅಥವಾ ಕಥೋಲಿಕ ಉಪದೇಶ ಅಥವಾ ನೈತಿಕ ತತ್ವಗಳನ್ನು ಪರಿಷ್ಕರಿಸುವುದಲ್ಲ ಎಂದು ಕಾರ್ಡಿನಲ್ ಫ್ಯಾರೆಲ್ ಸ್ಪಷ್ಟಪಡಿಸಿದರು. ಇಂತಹ ಬದಲಾವಣೆಗಳು ಜನರನ್ನು ಮತ್ತೆ ಮಸ್ಸಿಗೆ ತರುವುದಿಲ್ಲ, ಧಾರ್ಮಿಕ ವೃತ್ತಿಗಳನ್ನು ಹೆಚ್ಚಿಸುವುದಿಲ್ಲ, ಅಥವಾ ಯುವಜನರನ್ನು ಮತ್ತೆ ಧರ್ಮ ಸಭೆ ಕಡೆಗೆ ಆಕರ್ಷಿಸುವುದಿಲ್ಲ ಎಂದು ಅವರು ಹೇಳಿದರು.ಬದಲಾಗಿ, ಪ್ರತಿಯೊಂದು ಸ್ಥಳೀಯ ಧರ್ಮ ಸಭೆ, ಧರ್ಮಪ್ರಾಂತ್ಯ ಮತ್ತು ಪರಿಷತ್ತು ಶಾಶ್ವತವಾಗಿ ಸುವಾರ್ತಾಪ್ರಚಾರದ ಮಾರ್ಗಗಳು, ಧರ್ಮೋಪದೇಶ, ವಿಶ್ವಾಸದ ಪ್ರಾಥಮಿಕ ಘೋಷಣೆ, ಕ್ರೈಸ್ತ ದೀಕ್ಷೆ, ವಿಶ್ವಾಸದಲ್ಲಿ ರೂಪಣೆ, ಮತ್ತು ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಜೊತೆಯಾಗಿ ನಡೆಯುವ ಸಹವಾಸವನ್ನು ಒದಗಿಸಬೇಕೆಂದು ಅವರು ಒತ್ತಿಹೇಳಿದರು

ಜಗದ್ಗುರು XIVನೇ ಲಿಯೋರವರು ತಮ್ಮ ಪ್ರೇಷಿತರ ಪತ್ರ ಡ್ರಾಯಿಂಗ್ ನ್ಯೂ ಮ್ಯಾಪ್ಸ್ ಆಫ್ ಹೋಪ್  ನಲ್ಲಿ, ಕ್ರೈಸ್ತ ರೂಪಣೆ ಸಂಪೂರ್ಣ ವ್ಯಕ್ತಿಯನ್ನು  ಆಧ್ಯಾತ್ಮಿಕ, ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಮತ್ತು ದೈಹಿಕ ಆಯಾಮಗಳೊಂದಿಗೆ ಒಳಗೊಂಡಿರಬೇಕು ಎಂದು ದೃಢಪಡಿಸಿದ್ದನ್ನು ಕಾರ್ಡಿನಲ್ ಫ್ಯಾರೆಲ್ ನೆನಪಿಸಿದರು. ಜೊತೆಗೆ, ಉತ್ಸಾಹಭರಿತ  ಧರ್ಮೋಪದೇಶ, ಸಂಸ್ಕಾರ ಜೀವನಕ್ಕೆ ಪರಿಚಯ, ದೈವಾರಾಧನ ವಿಧಿಯ ಆಚರಣೆಗಳು, ಪ್ರಾರ್ಥನಾ ಜೀವನ, ಪವಿತ್ರ ಶಾಸ್ತ್ರದ ಬೆಳಕಿನಲ್ಲಿ ಜೀವನ ಪರಿಶೀಲನೆ, ಸಂವಾದ, ಸಹೋದರತ್ವದ ಅನುಭವಗಳು, ಸೇವೆ, ದಾನಧರ್ಮ ಮತ್ತು ಮಿಷನರಿ ಚಟುವಟಿಕೆಗಳನ್ನು ಉತ್ತೇಜಿಸಿದರು.

ಈ ರೂಪಣೆಯ ಪ್ರಮುಖ ಅಂಶವೆಂದರೆ ಎಲ್ಲಾ ಧರ್ಮ ಸಭೆಯ ಘಟಕಗಳ  ಯಾಜಕರು, ಸಾಮಾನ್ಯ ವಿಶ್ವಾಸಿಗಳು, ಕುಟುಂಬಗಳು, ಅವಿವಾಹಿತರು, ಸಮರ್ಪಿತ ವ್ಯಕ್ತಿಗಳು,  ಸಾಮಾನ್ಯ ಕ್ರೈಸ್ತ ಪ್ರಜೆ ಸಂಘಗಳು ಮತ್ತು ಚಳವಳಿಗಳು, ಯುವ ಗುಂಪುಗಳು, ಪರಿಷತ್ ರಚನೆಗಳು ಮತ್ತು ಕಾರ್ಯಕ್ರಮಗಳು, ಆನ್‌ಲೈನ್ ರೂಪಣೆ ಮತ್ತು “ವೆಬ್ ಪ್ರೇಷಿತರು” ಸೇರಿದಂತೆ ಪರಸ್ಪರ ಸಹಕಾರವಾಗಿರಬೇಕು ಎಂದು ಅವರು ಹೇಳಿದರು.

ಕುಟುಂಬಗಳು ಮತ್ತು ದಂಪತಿಗಳ ರೂಪಣೆ

ಕುಟುಂಬಗಳು ಮತ್ತು ದಂಪತಿಗಳಿಗೆ ಕ್ರೈಸ್ತ ರೂಪಣೆ ಹಾಗೂ ಜೊತೆಯಾಗಿ ನಡೆಯುವ ಮಾರ್ಗದರ್ಶನ ಅತ್ಯಂತ ಅಗತ್ಯವೆಂದು ಕಾರ್ಡಿನಲ್ ಫ್ಯಾರೆಲ್ ವಿಶೇಷವಾಗಿ ಒತ್ತಿಹೇಳಿದರು. ಅದ್ ಲಿಮಿನ   ಭೇಟಿಗಳ ವೇಳೆ ಬಿಷಪ್‌ಗಳ ಮಾತುಗಳನ್ನು ಕೇಳಿದಾಗ, ಹಾಗು ಡಿಕಾಸ್ಟರಿಯ ಇತರ ಸಂವಾದಕರ್ತರಿಂದ, ವಿವಾಹಿತ ಆತ್ಮಿಕತೆ, ವೈವಾಹಿಕ ಜೀವನ, ಕುಟುಂಬ ಪ್ರಾರ್ಥನೆ ಮತ್ತು ಮಕ್ಕಳಿಗೆ ವಿಶ್ವಾಸವನ್ನು ವರ್ಗಾಯಿಸುವ ವಿಷಯಗಳಲ್ಲಿ ಕುಟುಂಬಗಳಿಗೆ ರೂಪಣೆಯ ಅವಕಾಶಗಳನ್ನು ಒದಗಿಸುವ ಅಗತ್ಯ ಬಹಳವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಈ ಹಿನ್ನೆಲೆಯಲ್ಲಿ, ಇಂತಹ ರೂಪಣೆಯನ್ನು ಮುಖ್ಯವಾಗಿ ದಂಪತಿಗಳೇ ಮುನ್ನಡೆಸಬೇಕು ಎಂದು ಅವರು ಉತ್ತೇಜಿಸಿದರು. ತಮ್ಮದೇ ಜೀವನದ ಸಾಕ್ಷಿಯ ಮೂಲಕ ಅವರು ಇತರ ದಂಪತಿಗಳಿಗೆ  ವಿಶೇಷವಾಗಿ ಯುವ ದಂಪತಿಗಳು ಮತ್ತು ಸಂಕಷ್ಟದ ಸಂದರ್ಭಗಳನ್ನು ಎದುರಿಸುತ್ತಿರುವವರಿಗೆ  ಮಾರ್ಗದರ್ಶನ, ಬೆಳಕು ಮತ್ತು ಬೆಂಬಲ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಆದ್ದರಿಂದ, ಧಮ೯ಸಭೆಯು ಅನೇಕ ಜನರನ್ನು ವಿಶ್ವಾಸದತ್ತ ಹತ್ತಿರ ತರುವಲ್ಲಿ ಉತ್ಸಾಹ ಮತ್ತು ಸೃಜನಶೀಲತೆಯಿಂದ ನೆರವಾಗುವ ಹೊಸ ಸಂತರ ಉದಯಕ್ಕಾಗಿ ಪ್ರಾರ್ಥಿಸಬೇಕೆಂದು ಅವರು ಆಹ್ವಾನಿಸಿದರು. ಜೊತೆಗೆ, ಸುವಾರ್ತಾಪ್ರಚಾರ ಮತ್ತು ಧರ್ಮೋಪದೇಶಕ್ಕೆ ಹೊಸ ಉತ್ಸಾಹ ಬೆಳೆಸುವಂತೆ ಪ್ರೋತ್ಸಾಹಿಸಿದರು.

ರೂಪಣೆಯ ಉದ್ದೇಶಗಳು

ಡಿಕಾಸ್ಟರಿಯ ರೂಪಣೆಯ ಗುರಿಗಳನ್ನು ಸಂಕ್ಷೇಪವಾಗಿ ವಿವರಿಸುತ್ತಾ, ಅನೇಕ ಧರ್ಮ ಸಭೆ ಪರಿಸರಗಳಲ್ಲಿ ವಿಶ್ವಾಸವನ್ನು ಜನರೊಳಗೆ ಬೆಳೆಸುವುದಿಲ್ಲ ಬದಲಾಗಿ ಅದನ್ನು ಸಹಜವಾಗಿ ಇರುವುದಾಗಿ ಪರಿಗಣಿಸಲಾಗುತ್ತಿದೆ ಎಂದು ಕಾರ್ಡಿನಲ್ ಫ್ಯಾರೆಲ್ ಹೇಳಿದರು. ಆದ್ದರಿಂದ, ಕ್ರೈಸ್ತ ರೂಪಣೆ ವಿಶ್ವಾಸವನ್ನು ಹುಟ್ಟಿಸಬೇಕು ಮತ್ತು ಜನರನ್ನು ದೇವರೊಂದಿಗೆ ಮತ್ತು ಕ್ರಿಸ್ತನೊಂದಿಗೆ ಜೀವಂತ ಸಂಬಂಧಕ್ಕೆ ಕರೆದೊಯ್ಯಬೇಕು ಧರ್ಮ ಸಭೆಯೊಳಗೆ ಪಕ್ವವಾದ ಕ್ರೈಸ್ತ ಜೀವನವನ್ನು ಬೆಳೆಸಬೇಕು ಎಂದು ಅವರು ಹೇಳಿದರು.

ಧರ್ಮಾಧ್ಯಕ್ಷೀಯ ಸಮ್ಮೇಳನಗಳು ರೂಪಣೆಗೆ ನಿಜವಾದ ಬದ್ಧತೆಯನ್ನು ತೋರಬೇಕು ಮತ್ತು ಸ್ಥಳೀಯ ಧರ್ಮ ಸಭೆಗಳು ತಮ್ಮ ಧರ್ಮಾಧಿಕಾರಿಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಬಹುದಾದ ಕ್ರೈಸ್ತ ರೂಪಣೆಯ ಮಾರ್ಗಸೂಚಿಗಳನ್ನು ರೂಪಿಸಲು ಮೂಲಭೂತ ಮಾನದಂಡಗಳನ್ನು ಗುರುತಿಸಬೇಕೆಂದು ಅವರು ಒತ್ತಿಹೇಳಿದರು.

ವಿಶ್ವ ಸಭೆಗಳು

ಡಿಕಾಸ್ಟರಿಯು ಆಯೋಜಿಸುವ ವಿಶ್ವ ಸಭೆಗಳ ಕುರಿತು ವಿಶ್ವ ಯುವ ದಿನ, ವಿಶ್ವ ಕುಟುಂಬ ಸಭೆ, ಮತ್ತು ಅಜ್ಜ-ಅಜ್ಜಿಯರು ಹಾಗೂ ವೃದ್ಧರ ವಿಶ್ವ ದಿನ ಸೇರಿದಂತೆ ಮಾತನಾಡಿದ ಕಾರ್ಡಿನಲ್ ಫ್ಯಾರೆಲ್, ಜಗತ್ತಿನಾದ್ಯಂತ ನಡೆಯುತ್ತಿರುವ ಆಳವಾದ ಬದಲಾವಣೆಗಳನ್ನು ಪರಿಗಣಿಸಬೇಕೆಂದು ಹೇಳಿದರು. ಸಾಂಸ್ಕೃತಿಕ ಮತ್ತು ಆರ್ಥಿಕ ಜಾಗತೀಕರಣ, ಹೆಚ್ಚುತ್ತಿರುವ ಸಾಮಾಜಿಕ ಚಲನೆ ಮತ್ತು ಅಂತರಸಾಂಸ್ಕೃತಿಕತೆ, ಧಾರ್ಮಿಕ ನಿರ್ಲಕ್ಷ್ಯ ಹೆಚ್ಚಳ, ಹಾಗೂ ಯುವ ಪೀಳಿಗೆಯಲ್ಲಿ ಆತ್ಮಿಕತೆಯತ್ತ ಪುನಃ ಜಾಗೃತ ಹುಡುಕಾಟಗಳನ್ನು ಅವರು ಉದಾಹರಿಸಿದರು.

ಜಗದ್ಗುರುಗಳು ಧರ್ಮಾಧಿಕಾರಿಗಳಿಗೆ ಈ ಪರಿಸ್ಥಿತಿಗಳನ್ನು ಎದುರಿಸಿ, ಸೃಜನಶೀಲತೆ ಮತ್ತು ಹೊಸ ವಿಧಾನಗಳಿಗೆ ಕರೆ ನೀಡಿದರು. ಸಭೆಗಳು ಸುವಾರ್ತೆಯ ದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿಯಾಗಲಿ, ಜನರ ಹೃದಯಗಳನ್ನು ಸ್ಪರ್ಶಿಸಲಿ, ಕೃಪೆಯನ್ನು ಹರಡಲಿ ಮತ್ತು ಅವರ ಜೀವನದಲ್ಲಿ ದೀರ್ಘಕಾಲೀನ ಪರಿಣಾಮ ಬೀರಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಇವು ಯೇಸು ಕ್ರಿಸ್ತನೊಂದಿಗೆ ನಿಜವಾದ ಭೇಟಿಯ ಅನುಭವಗಳು ಆಗಬೇಕು ಎಂದು ಅವರು ಹೇಳಿದರು.

ಡಿಕಾಸ್ಟರಿಯ ಚಟುವಟಿಕೆಗಳು

ತಮ್ಮ ಭಾಷಣದಲ್ಲಿ, ಕಾರ್ಡಿನಲ್ ಫ್ಯಾರೆಲ್ ರವರು 2016ರಲ್ಲಿ ಸ್ಥಾಪನೆಯಾದ ನಂತರ ಡಿಕಾಸ್ಟರಿಯು ಕೈಗೊಂಡ ಕೆಲಸಗಳನ್ನೂ ವಿಮರ್ಶಿಸಿದರು. ಸಂಘಗಳು ಮತ್ತು ಚಳವಳಿಗಳ ಕ್ಷೇತ್ರದಲ್ಲಿ, ನಿರ್ವಾಹಕರ ಎಂಟು ವಾರ್ಷಿಕ ಸಭೆಗಳು ನಡೆದಿದ್ದು, ಸಭೆಗಳು, ವಿಧಿವಿಧಾನಗಳ ಪರಿಶೀಲನೆ ಮತ್ತು ರೂಪಣಾ ಮುಂದಾಳತ್ವಗಳ ಮೂಲಕ ನಿರಂತರ ಜೊತೆಯಾಟ ನಡೆಯುತ್ತಿದೆ ಎಂದು ಅವರು ಹೇಳಿದರು.

ಕುಟುಂಬ ಮತ್ತು ಜೀವನ ವಿಭಾಗದಲ್ಲಿ, 2018ರಲ್ಲಿ ಡಬ್ಲಿನ್‌ನಲ್ಲಿ ಮತ್ತು 2022ರಲ್ಲಿ ರೋಮ್‌ನಲ್ಲಿ ಎರಡು ವಿಶ್ವ ಕುಟುಂಬ ಸಭೆಗಳು ನಡೆದಿವೆ. 2022ರಲ್ಲಿ, ವಿವಾಹದ ಸಿದ್ಧತೆ ಮತ್ತು ವಿವಾಹ ಜೀವನದ ಪ್ರಾರಂಭಿಕ ವರ್ಷಗಳಲ್ಲಿ ಜೊತೆಯಾಗಿ ನಡೆಯುವ ಮಾರ್ಗದರ್ಶನವನ್ನು ಪರಿಚಯಿಸುವ ಉದ್ದೇಶದಿಂದ ವಿವಾಹಿತ ಜೀವನಕ್ಕೆ ಕ್ಯಾಟೆಚುಮೆನಲ್ ಮಾರ್ಗಗಳು  ಎಂಬ ದಾಖಲೆ ಪ್ರಕಟಿಸಲಾಯಿತು.

ಜೀವನದ ಧರ್ಮಾಧಿಕಾರಿಯ ಆರೈಕೆಯ ವಿಷಯದಲ್ಲಿ, ಜೀವನ ಯಾವಾಗಲೂ ಸುಂದರ ಎಂಬ ಸಂಪನ್ಮೂಲವನ್ನು ಬಳಸಿ ಅನೇಕ ಧರ್ಮಾದ್ಯಕ್ಷೀಯ ಸಮ್ಮೇಳನಗಳು ಕೈಗೊಂಡ ಕೆಲಸಗಳನ್ನು ಅವರು ನೆನಪಿಸಿದರು.

ಯುವ ಧರ್ಮಾದಿಕಾರಿಯ ಸೇವೆಯಲ್ಲಿ, 2019ರಲ್ಲಿ ಪನಾಮಾದಲ್ಲಿ ಮತ್ತು 2023ರಲ್ಲಿ ಲಿಸ್ಬನ್‌ನಲ್ಲಿ ವಿಶ್ವ ಯುವ ದಿನ ಆಚರಿಸಲಾಯಿತು; 2027ರಲ್ಲಿ ಸಿಯೋಲ್‌ನಲ್ಲಿ ನಡೆಯುವ ವಿಶ್ವ ಯುವ ದಿನದ ಸಿದ್ಧತೆಗಳು ನಡೆಯುತ್ತಿವೆ. ವೃದ್ಧ ಧರ್ಮಾದಿಕಾರಿಗಳ ಆರೈಕೆಯಲ್ಲಿ, 2020 ಮತ್ತು 2025ರಲ್ಲಿ ಎರಡು ಅಂತರರಾಷ್ಟ್ರೀಯ ಕಾಂಗ್ರೆಸಸ್‌ಗಳು ನಡೆದಿವೆ ಎಂದು ಅವರು ತಿಳಿಸಿದರು.

05 ಫೆಬ್ರವರಿ 2026, 14:33